Advertisement

ಸಿಲಿಕಾನ್‌ ಸಿಟಿಯಲ್ಲಿ ಮತ್ತೆ ವರುಣನ ಆರ್ಭಟ

08:20 AM Sep 25, 2017 | Team Udayavani |

ಬೆಂಗಳೂರು: ತಡರಾತ್ರಿ ಸಿಲಿಕಾನ್‌ ಸಿಟಿಯ ಹಲವೆಡೆ ಮಳೆರಾಯನ ಅರ್ಭಟ ಮತ್ತೆ ಹೆಚ್ಚಾಗಿದ್ದು ನಗರದ ಲಾಲ್‌ಬಾಗ್‌, ವಿಲ್ಸನ್‌ ಗಾರ್ಡನ್‌, ಕಾರ್ಪೋರೇಷನ್‌, ಮೆಜೆಸ್ಟಿಕ್‌ ಸೇರಿದಂತೆ ಹಲವು ಕಡೆ ಮಳೆ ಸುರಿದೆದೆ.

Advertisement

ಮಳೆಯಿಂದಾಗಿ ಅಂಡಾರ್‌ ಪಾಸ್‌ ಸಂಪೂರ್ಣವಾಗಿ ಜಲಾವೃತಗೊಂಡಿದೆ ಇದರಿಂದಾಗಿ 2 ಕಾರುಗಳು ಅಂಡರ್‌ ಪಾಸ್‌ನಲ್ಲಿ ಸಿಲುಕೊಂಡಿದೆ. ಜೆಸಿಬಿ ಸಹಾಯದಿಂದ ಕಾರುಗಳನ್ನು ಹೊರ ತೆಗೆಯಲಾಯಿತು.

ಬಂಗಾಳಕೊಲ್ಲಿಯಲ್ಲಿ ಮಾಯುಬಾರ ಕುಸಿತದಿಂತ ರಾಜ್ಯದ ಹಲವೆಡೆ ಇನ್ನು ಎರಡು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ನಗರದಲ್ಲಿ ಸೆಪ್ಟೆಂಬರ್‌ನ ವಾಡಿಕೆ ಮಳೆ 211.5 ಮಿ.ಮೀ. ಆದರೆ, ಇನ್ನೂ ತಿಂಗಳಾಂತ್ಯಕ್ಕೆ ಆರು ದಿನಗಳು ಬಾಕಿ ಇರುವಾಗಲೇ ಒಂದೂವರೆಪಟ್ಟು ಹೆಚ್ಚು ದಾಖಲಾಗಿದೆ. ಒಟ್ಟಾರೆ ಬಿದ್ದ 376.7 ಮಿ.ಮೀ. ಮಳೆಯಲ್ಲಿ ಸೆ. 1ರಂದು ಅತಿ  ಹೆಚ್ಚು 72.0 ಮಿ.ಮೀ. ಮಳೆ ಆಗಿದೆ. ಮುಂದಿನ ಎರಡು-ಮೂರು ದಿನಗಳು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ ಇರುವುದರಿಂದ ಈ ಪ್ರಮಾಣ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next