Advertisement

ಆರ್ಡಿ: ಬಸ್ಸಿನಲ್ಲೇ ಹೃದಯಾಘಾತ

06:00 AM Apr 23, 2018 | Team Udayavani |

ಸಿದ್ದಾಪುರ:  ಬೆಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಕುಂದಾಪುರ ತಾಲೂಕಿನ ಆರ್ಡಿಗೆ ಬರುತ್ತಿದ್ದ ಆರ್ಡಿ ಮೇಲ್‌ಬೆಟ್ಟು ಜೆಡ್ಡು ಚಂದ್ರ ಶೆಟ್ಟಿ (43)  ಎ.21ರ ಸಂಜೆ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ.

Advertisement

ಅವರು 8 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಎ.21ರ ಮುಂಜಾನೆ 5 ಗಂಟೆ ವೇಳೆಗೆ ಬೆಂಗಳೂರಿನಿಂದ ಹೊರಟು, ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಆಗುಂಬೆ ಮಾರ್ಗವಾಗಿ ಹೆಬ್ರಿಗೆ ತಲುಪಿದರು. ಅಲ್ಲಿಂದ ಖಾಸಗಿ ಬಸ್‌ನಲ್ಲಿ ಆರ್ಡಿಗೆ ಬರು ವಾಗ ಆರ್ಡಿ ಸಮೀಪದ ಮಾಂಡಿಮೂರು ಕೈ ಹತ್ತಿರದ ಮುಂಡಳ್ಳಿಗೆ  ತಲುಪುತ್ತಿದ್ದಂತೆ ಅವರು ಕುಸಿದು ಬಿದ್ದರು. ಬಸ್‌ ಸಿಬಂದಿ ಮಾಂಡಿಮೂರುಕೈ ಬಳಿ ಬಸ್‌ ನಿಲ್ಲಿಸಿ, 108 ವಾಹನದ ಸಹಾಯದಿಂದ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಾಗ  ವೈದ್ಯರು ಮೃತ ಪಟ್ಟಿರುವುದನ್ನು ಖಚಿತ ಪಡಿಸಿದರು.  

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next