Advertisement

ಪೌಷ್ಟಿಕ ಆಹಾರ ಸೇವೆಯಿಂದಆರೋಗ್ಯ ವೃದ್ಧಿ: ಚನ್ನಪ್ಪ

03:57 PM Oct 05, 2018 | Team Udayavani |

ಸಂಡೂರು: ಶಾಲೆ ಎಷ್ಟು ಮುಖ್ಯವೋ, ಮನೆಯೂ ಸಹ ಅಷ್ಟೇ ಪ್ರಾಮುಖ್ಯವಾಗಿದೆ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎನ್ನುವಂತೆ ತಾಯಿಯನ್ನು ಇಂದು ಮಾತೃವಂದನೆ ಎನ್ನುವ ವಿಶೇಷ ಕಾರ್ಯಕ್ರಮದ
ಮೂಲಕ ಅವರನ್ನು ಗೌರವಿಸುವುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ ಅಭಿಪ್ರಾಯಪಟ್ಟರು.

Advertisement

ಪಟ್ಟಣದ 3ನೇ ವಾರ್ಡ್‌ನ ಅಂಗನವಾಡಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಮದ ಹಮ್ಮಿಕೊಂಡಿದ್ದ ಮಾತೃ ವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ಭಜಂತ್ರಿ ಮಾತನಾಡಿ, ಅಪೌಷ್ಟಿಕತೆಯಿಂದ ಗರ್ಭಿಣಿಯರು ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಮಾತೃವಂದನ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಅವರಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದು, ಇದನ್ನು ಗರ್ಭಿಣಿಯರು, ಬಾಣಂತಿಯರು ಸದುಪಯೋಗ
ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. 

ಪುರಸಭೆ ಉಪಾಧ್ಯಕ್ಷ ಕೆ.ವಿ.ಸುರೇಶ್‌, ಸದಸ್ಯೆ ನೂರ್‌ ಜಹಾನ್‌, ಸಲಹಾ ಸಮಿತಿ ಸದಸ್ಯ ಮೌಲಾಸಾಬ್‌, ಆರೋಗ್ಯ ಇಲಾಖೆ ಅಧಿಕಾರಿಗಳಾದ ನಾಗವೇಣಿ, ಅನುಷಾ, ಅಂಗನವಾಡಿ ಕಾರ್ಯಕರ್ತೆಯರಾದ ಈರಮ್ಮ, ಮೀನಾಕ್ಷಿ,
ಪೂರ್ಣಿಮ, ರುದ್ರಮ್ಮ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next