Advertisement

ಕಾಂಗ್ರೆಸ್‌ನಿಂದ ಆರೋಗ್ಯ ವಿಚಾರಣೆ

12:12 PM Feb 09, 2022 | Team Udayavani |

ವಾಡಿ: ಚಿಕನ್‌ ಫಾಕ್ಸ್‌ದಿಂದ ಮೃತಪಟ್ಟ ನಾಲವಾರ ಸ್ಟೇಷನ್‌ ಬಡಾವಣೆಯ ಇಬ್ಬರು ಬಾಲಕರ ಮನೆಗೆ ಮಂಗಳವಾರ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

Advertisement

ಕಲಬುರಗಿ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯಯುತವಾಗಿ ಮನೆಗೆ ಮರಳಿದ ಮೃತ ಬಾಲಕರ ಹೆತ್ತಮ್ಮ ಹಫೀಜಾ ಬೇಗಂ, ಮಕ್ಕಳಾದ ನಫೀಜಾ ಮತ್ತು ಅರ್ಮಾನ್‌ ಅವರ ಆರೋಗ್ಯ ವಿಚಾರಿಸಿದರು.

ಮಕ್ಕಳನ್ನು ಕಳೆದುಕೊಂಡ ತಾಯಿ ಹಫೀಜಾಬೇಗಂ ಅವರಿಗೆ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ 30,000ರೂ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ್‌ ಧನಸಹಾಯ ಮಾಡಿದರು. ವೀರಣ್ಣಗೌಡ ಪರಸರೆಡ್ಡಿ, ಟೋಪಣ್ಣ ಕೋಮಟೆ, ಶಂಕ್ರಯ್ಯಸ್ವಾಮಿ ಮದರಿ, ಪುರಸಭೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಪುರಸಭೆ ಸದಸ್ಯ ಮಲ್ಲಯ್ಯ ಗುತ್ತೇದಾರ, ಮುಖಂಡರಾದ ಮಹ್ಮದ್‌ ರಸೂಲ್‌, ಮಹ್ಮದ್‌ ಅಶ್ರಫ್‌ ಖಾನ್‌, ವಿಜಯಕುಮಾರ ಸಿಂಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next