Advertisement

Kasaragod ಬೈಕ್‌ಗಳ ಮುಖಾಮುಖಿ ಢಿಕ್ಕಿ; ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

10:44 PM May 15, 2024 | Team Udayavani |

ಕಾಸರಗೋಡು: ಚಟ್ಟಂಚಾಲ್‌ನಲ್ಲಿ ಮೇ 14ರಂದು ರಾತ್ರಿ 9ಕ್ಕೆ ಬೈಕ್‌ಗಳೆರಡು ಪರಸ್ಪರ ಢಿಕ್ಕಿ ಹೊಡೆದು ಚಟ್ಟಂಚಾಲ್‌ ತಾಯಲ್‌ ಬೆಂಡಿಚ್ಚಾಲ್‌ ಹೌಸ್‌ನ ಅಬ್ದುಲ್‌ ಗಫೂರ್‌ ಅವರ ಪುತ್ರ, ಮಂಗಳೂರಿನಲ್ಲಿ ಕಾಲೇಜ್‌ ವಿದ್ಯಾರ್ಥಿಯಾಗಿರುವ ಮೊಹಮ್ಮದ್‌ ತಸ್ಲಿಮ್‌(20) ಮೃತಪಟ್ಟರು.

Advertisement

ಜತೆಯಲ್ಲಿದ್ದ ಬೆಂಡಿಚ್ಚಾಲ್‌ನ ಶಫೀಕ್‌ (20) ಹಾಗೂ ಇನ್ನೊಂದು ಬೈಕ್‌ನಲ್ಲಿದ್ದ ಚಟ್ಟಂಚಾಲ್‌ ಕುನ್ನಾರದ ಅಶ್‌ಫಾದ್‌ (22) ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹರಡುತ್ತಿರುವ ಹಳದಿ ಕಾಮಾಲೆ
ಕಾಸರಗೋಡು: ಜಿಲ್ಲೆಯಲ್ಲಿ ಹಳದಿ ಕಾಮಾಲೆ ಜ್ವರ ವ್ಯಾಪಕವಾಗಿ ಹರಡುತ್ತಿದೆ. 2024ರಲ್ಲಿ ಈ ತನಕ 58 ಮಂದಿಗೆ ಹಳದಿ ಕಾಮಾಲೆ ಖಚಿತಪಡಿಸಲಾಗಿದೆ. 81 ಮಂದಿ ಚಿಕಿತ್ಸೆ ಪಡೆದಿದ್ದರು. ಮೊಗ್ರಾಲ್‌ಪುತ್ತೂರು ಪ್ರದೇಶದಲ್ಲಿ ಅತೀ ಹೆಚ್ಚು ಜ್ವರ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next