Advertisement

Thiruvananthapuram:ಸದಾಕಾಲ ಮೊಬೈಲ್‌ ಬಳಸುತ್ತಿದ್ದ-ಪ್ರಶ್ನಿಸಿದ್ದಕ್ಕೆ ತಾಯಿಯನ್ನೇ ಕೊಂದ!

09:55 PM Oct 14, 2023 | Team Udayavani |

ತಿರುವನಂತಪುರ: ಸದಾಕಾಲ ಮೊಬೈಲ್‌ ಬಳಕೆಮಾಡುತ್ತಿದ್ದನೆಂದು ಮಗನನ್ನು ಪ್ರಶ್ನಿಸಲು ಹೋದ ತಾಯಿ ಆತನಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟಿರುವ ದುರ್ಘ‌ಟನೆ ಕೇರಳದಲ್ಲಿ ವರದಿಯಾಗಿದೆ. ಕಣ್ಣೂರು ಜಿಲ್ಲೆಯ ಕನಿಚಿಯಾರ ನಿವಾಸಿಯಾಗಿದ್ದ ರುಕ್ಮಿಣಿ ಮೃತ ದುರ್ದೈವಿ.

Advertisement

ಆಕೆಯ ಮಗ ಸುಜಿತ್‌ ದಿನಂಪ್ರತಿ ಮೊಬೈಲ್‌ನಲ್ಲೇ ಮುಳುಗಿಹೋಗಿರುತ್ತಿದ್ದದ್ದನ್ನು ಕಂಡು ಬೇಸತ್ತ ಮಹಿಳೆ, ಮಗನಿಗೆ ಬುದ್ಧಿ ಹೇಳಿ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸುಜಿತ್‌ ತಾಯಿಯನ್ನೇ ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಜಜ್ಜಿದ್ದರ ಪರಿಣಾಮ ರುಕ್ಷ್ಮಿಣಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಜಿತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಗೆ ಅಲ್ಪಮಟ್ಟದ ಮಾನಸಿಕ ಅಸ್ವಸ್ತತೆ ಇರುವ ಕಾರಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next