Advertisement

ಅವನು ಮತ್ತು ಗುಂಡನ ಸಕ್ಸಸ್ಸು

10:13 AM Feb 08, 2020 | Lakshmi GovindaRaj |

“ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಫ‌ಲ ಸಿಕ್ಕಿದೆ.’ ಹೀಗೆ ಖುಷಿಯಿಂದ ಹೇಳಿದ್ದು ನಟ ಶಿವರಾಜ್‌ ಕೆ.ಆರ್‌.ಪೇಟೆ. ಅವರ “ನಾನು ಮತ್ತು ಗುಂಡ’ ಚಿತ್ರಕ್ಕೆ ಸಿಕ್ಕ ಸಕ್ಸಸ್‌ನಿಂದ ಇಡೀ ಚಿತ್ರತಂಡ ಖುಷಿಯಾಗಿತ್ತು. ಕನ್ನಡಿಗರ ಪ್ರೋತ್ಸಾಹ, ಪತ್ರಕರ್ತ ಬೆಂಬಲ ಇದ್ದುದರಿಂದ ಈ ಚಿತ್ರ ಗೆಲುವು ಕಂಡಿದೆ. ಎಲ್ಲರೂ ಭಾವುಕರಾಗಿಯೇ ಮಾತನಾಡುತ್ತಿದ್ದಾರೆ. ಸಿನಿಮಾ ಮಾಡಿದ್ದಕ್ಕೂ ಸಾರ್ಥಕತೆ ಆಗಿದೆ’ ಎಂದು ಖುಷಿ ಹಂಚಿಕೊಂಡರು ಅವರು.

Advertisement

ನಿರ್ದೇಶಕ ಶ್ರೀನಿವಾಸ್‌ ತಮ್ಮಯ್ಯ ಅವರು ಭಾವುಕರಾಗಿಯೇ ಮಾತಿಗಿಳಿದರು. ಆರಂಭದಲ್ಲಿ ನಿರ್ದೇಶಕನಾಗಲು ಸಾಕಷ್ಟು ಪರದಾಡಿದೆ. ನಿರ್ಮಾಪಕ ರಘು ಹಾಸನ್‌ ಕೊಟ್ಟ ಅವಕಾಶವನ್ನು ಪ್ರಾಮಾಣಿಕ, ಶ್ರದ್ಧೆಯಿಂದ ಮಾಡಿದೆ. ಈ ಗೆಲುವು ಪಡೆದೆ. ಇದು ನನ್ನೊಬ್ಬನ ಗೆಲುವಲ್ಲ. ಇಡೀ ಚಿತ್ರತಂಡದ ಸಕ್ಸಸ್‌. ಇನ್ನು, ನಮ್ಮಂತಹ ಹೊಸ ಪ್ರತಿಭೆಗಳನ್ನು ಗುರುತಿಸಿದ ಮಾಧ್ಯಮಕ್ಕೂ ಕೃತಜ್ಞನಾಗಿದ್ದೇನೆ. ಇಂತಹ ಚಿತ್ರ ಮಾಡೋದು ಸುಲಭದ ಮಾತಲ್ಲ. ಒಂದು ನಾಯಿ ಇಟ್ಟುಕೊಂಡು ಎಮೋಷನಲ್‌ ಕಥೆ ಹೇಳ್ಳೋದು ಕಷ್ಟಕರವಾಗಿತ್ತು. ಆ ಕಷ್ಟ ಈಗ ಖುಷಿ ಹೆಚ್ಚಿಸಿದೆ’ ಎಂದರು ಶ್ರೀನಿವಾಸ್‌.

ಸಂಗೀತ ನಿರ್ದೇಶಕ ಕಾರ್ತಿಕ್‌ ಶರ್ಮ ಕೂಡ ಖುಷಿಯಲ್ಲಿದ್ದರು. “ಒಂದು ಗೆಲುವಿನ ಚಿತ್ರದಲ್ಲಿ ನಾನೂ ಪಾಲುದಾರ ಎನ್ನಲು ಖುಷಿ ಆಗುತ್ತಿದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಹ ಕಥೆ ಇದು. ನನ್ನ ಮೊದಲ ಚಿತ್ರ ಅಂತಾನೇ ಭಾವಿಸಿ ಚಿತ್ರ ಮಾಡಿದ್ದೇನೆ. ಎಲ್ಲರ ಕೆಲಸ ಇಲ್ಲಿ ತೃಪ್ತಿ ಕೊಟ್ಟಿದೆ’ ಎಂದರು ಕಾರ್ತಿಕ್‌ ಶರ್ಮ. ನಿರ್ಮಾಪಕ ರಘು ಹಾಸನ್‌ ಅವರಿಗೆ ಗೆಲುವು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆಯಂತೆ. ಒಳ್ಳೆಯ ಕಥೆಯನ್ನು ಕನ್ನಡಿಗರು ಕೈ ಬಿಡಲಿಲ್ಲ. ನಾನು ಈ ಚಿತ್ರ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ ಎಂದರು ರಘು. ಅಂದು ಹಾಸ್ಯ ನಟ ಗೋವಿಂದೇಗೌಡ, ಕಥೆಗಾರ ವಿವೇಕನಂದಾ, ಸಂಭಾಷಣೆಗಾರ ಶರತ್‌ ಚಕ್ರವರ್ತಿ ತಮ್ಮ ಸಂತಸ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next