Advertisement

BJP ಅಧಿಕೃತ ವಕ್ತಾರರಾಗಿ ಎಚ್ ಡಿಕೆ ಕೆಲಸ ಮಾಡುತ್ತಿದ್ದಾರೆ: ವೀರಪ್ಪ ಮೊಯ್ಲಿ

08:23 PM Sep 07, 2023 | Team Udayavani |

ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷರು ಅತಂತ್ರರಾಗಿದ್ದು, ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಜತೆಗೆ ವಿರೋಧ ಪಕ್ಷದ ನಾಯಕ ಇಲ್ಲದ ಬಿಜೆಪಿಗೆ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಬಿಜೆಪಿ ಅಧಿಕೃತ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಭಾರತ್ ಜೋಡೋ ಯಾತ್ರೆ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಗುರುವಾರ ಸಂಜೆ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಡಿಯಾ ಒಕ್ಕೂಟದಿಂದ ದೂರ ಉಳಿದಿರುವ ಜೆಡಿಎಸ್ ಬಗ್ಗೆ ವಾಗ್ದಾಳಿ ನಡೆಸಿದರು.

ಜೆಡಿಎಸ್‌ನವರ ಡಿಕ್ಷನರಿಯಲ್ಲಿ ಸ್ವಾತಂತ್ರ್ಯ ಎಂಬ ಶಬ್ದವೇ ಇಲ್ಲ ಎಂದು ಗೇಲಿ ಮಾಡಿ,  ಅವರು ಯಾವಾಗಲೂ ಕೂಡ ಕೈ ಕೊಡುತಾರೆ, ನಮ್ಮ ಜತೆ ಇದ್ದು ನಿಮ್ಮನ್ನು ಗೆಲ್ಲಿಸುತ್ತೇವೆಂದು ಹೇಳಿ ಕಾಂಗ್ರೆಸ್ ವಿರುದ್ದ ಮಾಡಿದರು. ಅವರೂ ಸೋತರು. ಒಂದು ಸೀಟು ಮಾತ್ರ ಗೆದ್ದು ನಾವು ಕೂಡ ಸೋತೆವು. ಕಳೆದ ಲೋಕಸಭಾ ಚುನಾವಣೆ ವೇಳೆ ಆಗಿದ್ದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಒಂದು ರೀತಿ ಅವರಿಗೂ ಲಾಭ ಆಗದೇ, ನಮಗೂ ಲಾಭ ಆಗದೇ ಮಂಗ, ಮೇಕೆ ಕಥೆಯಂತೆ ಆಯಿತು ಎಂದು  ಕಿಡಿಕಾರಿದರು.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್, ಕುಮಾರಸ್ವಾಮಿರನ್ನು ಸಿಎಂ ಮಾಡಿದ್ದು ಕಾಂಗ್ರೆಸ್, ಆದರೆ ಕುಮಾರಸ್ವಾಮಿಗೆ ಮೋದಿ ಮೇಲೆ ಆಸೆ. ಇಂಡಿಯಾ ಒಕ್ಕೂಟ ಗೆಲ್ಲುವುದಿಲ್ಲ ಅಂತ ಅವರ ಮನಸ್ಸು ಈಗ ಮೋದಿ ಕಡೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next