Advertisement

CM HDK ಸಾಯ್ತೇನೆ ಅಂತಾರೆ,ಯಾರು ನಂಬ್ತಾರೆ; ಅಶೋಕ್‌ ವ್ಯಂಗ್ಯ 

03:08 PM Oct 31, 2018 | Team Udayavani |

ಮಂಡ್ಯ : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆರೋಗ್ಯ ಸರಿಯಿಲ್ಲ, ಸಾಯ್ತೇನೆ,ಸಾಯ್ತೇನೆ ಅಂತ ಅನುಕಂಪ ಗಿಟ್ಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌ .ಅಶೋಕ್‌ ಅವರು ವ್ಯಂಗ್ಯ ಮಾಡಿದ್ದಾರೆ.

Advertisement

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ  ಬುಧವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ  ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್‌ ಅಶೋಕ್‌ ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಮಂಡ್ಯಕ್ಕೆ ಬಂದು ಆರೋಗ್ಯ ಸರಿಯಿಲ್ಲ , ನಿಮಗೋಸ್ಕರ ಬದುಕಿದ್ದೇನೆ ಅಂದ್ರು. 7 ಸ್ಥಾನಗಳನ್ನು ಗೆಲ್ಲಿಸಿದ್ರಿ, ಸಿಎಂ ಆದರು, ಕಾರು, ಬಂಗ್ಲೆ ಎಲ್ಲವೂ ಸಿಕ್ಕಿತು. ಆ ಬಳಿಕ ಆದ್ರೂ ಅವರ ಆರೋಗ್ಯ ಸರಿಯಾಗಬೇಕಿತ್ತು. ಮತ್ತೆ ಈಗ ಬಂದು ಇಸ್ರೇಲ್‌ಗೆ ಹೋದಾಗಲೇ ಸಾಯಬೇಕಿತ್ತು, ಬದುಕಿ ಬಂದಿದ್ದೇನೆ ಅಂದ್ರು. ಹೀಗೆ ಹೇಳುತ್ತಾ ಹೋದರೆ ಯಾರು ನಂಬುತ್ತಾರೆ ಎಂದರು. 

ಎಚ್‌ಡಿಕೆ ಮುಖ್ಯಮಂತ್ರಿ ಆದ ಬಳಿಕ ಮಂಡ್ಯದಲ್ಲಿ 25 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next