Advertisement

ದುಷ್ಟ ಶಕ್ತಿಗಳ ಊರುಭಂಗವಾಗಲಿ: ಶುಭಾಶಯದೊಂದಿಗೆ ಎಚ್‌ಡಿಡಿ ಟಾಂಗ್‌ 

04:42 AM Jan 15, 2019 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಂಕ್ರಾಂತಿ ಶುಭಾಶಯದೊಂದಿಗೆ ಬಿಜೆಪಿಗೆ ಟಾಂಗ್‌ ನೀಡಿ ಕಿಚ್ಚು ಹಾಯಿಸಿದ್ದಾರೆ. 

Advertisement

ಆಪರೇಷನ್‌ ಕಮಲ ಯತ್ನಗಳು ನಡೆಯುತ್ತಿವೆ ಎನ್ನುವ ಸಂದರ್ಭದಲ್ಲಿ ಎಚ್‌ಡಿಡಿ ಅವರ ಈ ಟ್ವೀಟ್‌ ಅವರ ಆತಂಕವನ್ನು ಸೂಚಿಸುತ್ತಿದೆ.   

‘ಸಮಸ್ತರಿಗೂ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ ಮನೆಗಳಲ್ಲಿ  ಸುಖ, ಶಾಂತಿ, ಸಮೃದ್ಧಿ ತರಲಿ ಎಂದು‌ ಹಾರೈಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next