Advertisement

ಯಾರ ಹಂಗಿನಲ್ಲೂ ಇಲ್ಲ; ಸಿಎಂ ಎಚ್ ಡಿಕೆ v/s ಸಿದ್ದರಾಮಯ್ಯ ಶೀತಲ ಸಮರ!

12:16 PM Jun 25, 2018 | Team Udayavani |

ಬೆಂಗಳೂರು: ನಾನು ಯಾರ ಹಂಗಿನಲ್ಲೂ ಇಲ್ಲ, ಯಾರ ಅಧಿಕಾರದ ಭಿಕ್ಷೆಯಲ್ಲೂ ಇಲ್ಲ. ಸಾಲಮನ್ನಾ ಮಾಡೋದರಿಂದ ನನಗೇನೂ ಕಮಿಷನ್ ಸಿಗಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

Advertisement

ಸೋಮವಾರ ವಿಧಾನಸೌಧದಲ್ಲಿ ನಡೆದ ಸಹಕಾರಿ ಬ್ಯಾಂಕ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಒಂದೊಂದು ಸರ್ಕಾರ ಬಂದಾಗ ಒಂದೊಂದು ನೀತಿ ತರುತ್ತಾರೆ. ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಇರೋತ್ತೋ ಇಲ್ಲವೋ ಎಂಬುದಾಗಿ ದೂರುತ್ತಿದ್ದಾರೆ. ಇಂತಹ ಮಾತುಗಳು ಖಂಡಿತಾ ಬೇಡ ಎಂದು ಹೇಳಿದರು.

ನಾನು ಸ್ಮೂತ್ ಗೋಯಿಂಗ್ ಇದ್ದೇನೆ ಎಂದು ಅಧಿಕಾರಿಗಳಿಗೆ ಗೊತ್ತು. ನಾನೇನು ಬೇರೆಯವರ ರೀತಿ ದುರಹಂಕಾರ ಅಥವಾ ಗಡಸು ಧ್ವನಿಯಲ್ಲಿ ಮಾತಾಡಲ್ಲ ಎಂದು ಚಾಟಿ ಬೀಸಿದ್ದಾರೆ.

ರೈತರ ಆತ್ಮಹತ್ಯೆಗೂ, ಸಾಲಮನ್ನಾಕ್ಕೂ ಸಂಬಂಧವಿಲ್ಲ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗಬೇಕು ಎಂಬುದು ನನ್ನ ಕಾಳಜಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next