Advertisement

ಎಚ್‌ಸಿಎಲ್‌ ಇಂಜಿನಿಯರ್‌ ಅಪಹರಣ; 15 ಲಕ್ಷ ಒತ್ತೆಹಣಕ್ಕೆ ಬೇಡಿಕೆ

10:57 AM May 26, 2018 | Team Udayavani |

ಗಾಜಿಯಾಬಾದ್‌ : ನೋಯ್ಡಾದಲ್ಲಿನ ಎಚ್‌ಸಿಎಲ್‌ ಟೆಕ್ನಾಲಜಿ ಲಿಮಿಟೆಡ್‌ನ‌  ಇಂಜಿನಿಯರ್‌ ರಾಜೀವ್‌ ಕುಮಾರ್‌ ಅವರನ್ನು ಒತ್ತೆ ಹಣಕ್ಕಾಗಿ ಅಪಹರಿಸಿರುವ ಘಟನೆ ನಿನ್ನೆ ಶುಕ್ರವಾರ ನಡೆದಿದೆ.

Advertisement

ಗಾಜಿಯಾಬಾದ್‌ ನಿವಾಸಿಯಾಗಿರುವ ರಾಜೀವ್‌ ಕುಮಾರ್‌ ಗುರುವಾರ ತಡರಾತ್ರಿ ವರೆಗೂ ಮನೆಗೆ ವಾಪಸಾಗಿರಲಿಲ್ಲ. ಅವರ ಪತ್ನಿಗೆ ಅಪಹರಣಕಾರರಿಂದ ಮೊಬೈಲ್‌ ಮೆಸೇಜ್‌ ಬಂದಿದ್ದು ಅದರಲ್ಲಿ ಅವರು 15 ಲಕ್ಷ ರೂ. ಒತ್ತೆಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಪೊಲೀಸರಿಗೆ ವಿಷಯ ತಿಳಿಸಿದರೆ ನಿಮ್ಮ ಪತಿಯನ್ನು ಕೊಲ್ಲಲಾಗುವುದು ಎಂದು ಅಪಹರಣಕಾರರು ಬೆದರಿಕೆ ಹಾಕಿದ್ದಾರೆ. ಆದರೂ ಬೇರೆ ಉಪಾಯವಿಲ್ಲದೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿಯನ್ನು ಸುರಕ್ಷಿತವಾಗಿ ಪಾರು ಮಾಡುವ ಭರವಸೆಯನ್ನು ಪೊಲೀಸ್‌ ಅಧಿಕಾರಿ ಆತಿಷ್‌ ಕುಮಾರ್‌ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next