Advertisement

ಈ ಮನೆಯಲ್ಲಿ ಎರಡು ದಿನದಲ್ಲಿ ನಾಲ್ಕು ಹಾವು ಪ್ರತ್ಯಕ್ಷ: ಕುಟುಂಬಸ್ಥರ ಆತಂಕ

02:12 PM Dec 05, 2020 | sudhir |

ಹಾವೇರಿ: ನಗರದ ನಾಗೇಂದ್ರನಮಟ್ಟಿಯ ರೈಲ್ವೆ ಗೇಟ್‌ ಬಳಿಯ ಶಿವಯೋಗಿ ಬೆನ್ನೂರು ಅವರ ಮನೆಯ ಆವರಣದಲ್ಲಿ
ಶುಕ್ರವಾರ ನಾಗರ ಹಾವು ಪ್ರತ್ಯಕ್ಷಗೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು.

Advertisement

ಮನೆಯ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಮೂರ್ನಾಲ್ಕು ಹಾವುಗಳು ಕಂಡು ಬರುತ್ತಿದ್ದರಿಂದ ಕುಟುಂಬದವರು ಆತಂಕಗೊಂಡಿದ್ದರು.

ಶುಕ್ರವಾರ ಮತ್ತೆ ಸುಮಾರು 6 ಅಡಿಯ ನಾಗರಹಾವು ಪ್ರತ್ಯಕ್ಷಗೊಂಡಿದ್ದರಿಂದ ಉರುಗ ರಕ್ಷಕ ನಾಗರಾಜ ಬಿಜಾಪೂರ ಅವರನ್ನು ಸ್ಥಳಕ್ಕೆ ಕರೆಸಿ, ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ನಂತರ ಹಾವನ್ನು ನಗರದ ಹೊರವಲಯಲ್ಲಿ ಬಿಡಲಾಯಿತು.

ಇದನ್ನೂ ಓದಿ:ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿದೆ, ಇನ್ನಾದರೂ ಕಾಂಗ್ರೆಸ್ ಸಹವಾಸ ಬಿಡಲಿ : ಸಿ ಟಿ ರವಿ

Advertisement

Udayavani is now on Telegram. Click here to join our channel and stay updated with the latest news.

Next