Advertisement

ಅಸ್ಸಾಂ NRC ರೀತಿಯ ಜಾರ್ಖಂಡ್‌ ಪೌರರ ಪಟ್ಟಿ : ಕೇಂದ್ರಕ್ಕೆ ಮನವಿ

05:26 PM Sep 17, 2018 | udayavani editorial |

ರಾಂಚಿ : ಅಸ್ಸಾಂ ಎನ್‌ಆರ್‌ಸಿ ಮಾದರಿಯಲ್ಲೇ ಜಾರ್ಖಂಡ್‌ನ‌ಲ್ಲೂ ಪೌರರ ಪಟ್ಟಿಯನ್ನು ಪರಿಷ್ಕರಿಸಬೇಕೆಂದು ಕೇಂದ್ರ ಸರಕಾರವನ್ನು ಕೇಳಿಕೊಳ್ಳಲಾಗಿದೆ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ರಘುಬರ್‌ ದಾಸ್‌ ಹೇಳಿದ್ದಾರೆ.

Advertisement

ಈ ಪ್ರಕ್ರಿಯೆ ಮೂಲಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶೀಯರನ್ನು ಗುರುತಿಸಿ ಗಡೀಪಾರು ಮಾಡಲು ಸಾಧ್ಯವಾಗುವುದು ಎಂದವರು ಹೇಳಿದ್ದಾರೆ.

ಜಾರ್ಖಂಡ್‌ನ‌ಲ್ಲಿ ಬಾಂಗ್ಲಾ ನುಸುಳುಕೋರರು ವಾಸಿಸಿಕೊಂಡಿದ್ದಾರೆ. ರಾಜ್ಯ ಪೌರರರ ರಾಷ್ಟ್ರೀಯ ರಿಜಿಸ್ಟ್ರಿಯನ್ನು ಪರಿಷ್ಕರಿಸಿದ ಬಳಿಕ ಅಕ್ರಮ ಬಾಂಗ್ಲಾ ವಾಸಿಗಳನ್ನು ಗಡೀಪಾರು ಮಾಡಬೇಕಿದೆ ಎಂದು ದಾಸ್‌ ಅವರು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಅಕ್ರಮ ಬಾಂಗ್ಲಾ ವಾಸಿಗಳು ಸ್ಥಳೀಯ ಬುಡಕಟ್ಟು ಜನರ ಉದ್ಯೋಗಳನ್ನು ಕಸಿದುಕೊಂಡಿದ್ದಾರೆ ಎಂದು ದಾಸ್‌ ಆರೋಪಿಸಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next