Advertisement

ಪ್ರಮುಖ ಪಂದ್ಯಕ್ಕೂ ಮೊದಲೇ ಆರ್ ಸಿಬಿ ತಂಡದಿಂದ ಹೊರನಡೆದ ಇಬ್ಬರು ಸ್ಟಾರ್ ಆಟಗಾರರು!

02:57 PM Oct 11, 2021 | Team Udayavani |

ಶಾರ್ಜಾ: ಪ್ಲೇ ಆಫ್ ಹಂತ ತಲುಪಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಬಾರಿ ಮೂರನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆದಿರುವ ಆರ್ ಸಿಬಿ, ‘ ಈ ಸಲ ಕಪ್ ನಮ್ಮದೇ’ ಎಂಬ ಜೋಶ್ ನಲ್ಲಿದೆ.

Advertisement

ಆದರೆ ಪ್ರಮುಖ ಪಂದ್ಯಕ್ಕೂ ಮುನ್ನ ಇಬ್ಬರು ಆಟಗಾರರು ಆರ್ ಸಿಬಿ ತಂಡದಿಂದ ಹೊರ ನಡೆದಿದ್ದಾರೆ. ಲಂಕನ್ ಆಟಗಾರರಾದ ವಾನಿಂದು ಹಸರಂಗ ಮತ್ತು ದುಷ್ಮಂತ ಚಮೀರಾ ಅವರು ಆರ್ ಸಿಬಿ ಬಯೋ ಬಬಲ್ ತೊರೆದು ಲಂಕಾ ತಂಡದ ಬಬಲ್ ಸೇರಿದ್ದಾರೆ.

ಇದನ್ನೂ ಓದಿ:ಉತ್ಸಾಹದಿಂದ ತೇಲಾಡುತ್ತಿದ್ದೇನೆ: 79 ನೇ ವಸಂತಕ್ಕೆ ಕಾಲಿಟ್ಟ ಅಮಿತಾಬ್ ಬಚ್ಚನ್

ಟಿ20 ವಿಶ್ವಕಪ್ ಆರಂಭವಾಗುತ್ತಿದ್ದು, ಲಂಕಾ ತಂಡ ಅರ್ಹತಾ ಸುತ್ತು ಆಡಬೇಕಿದೆ. ಹೀಗಾಗಿ ಈ ಇಬ್ಬರು ಆಟಗಾರರು ತಮ್ಮ ರಾಷ್ಟ್ರೀಯ ಸೇವೆಗಾಗಿ ಆರ್ ಸಿಬಿ ತಂಡ ತೊರೆದಿದ್ದಾರೆ. ಈ ಬಗ್ಗೆ ಸ್ವತಃ ಆರ್ ಸಿಬಿ ಖಚಿತ ಪಡಿಸಿದೆ.


ವಾನಿಂದು ಹಸರಂಗ ಅವರು ಯುಎಇ ಚರಣದ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ದುಷ್ಮಂತ ಚಮೀರಾಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next