Advertisement

Congress ಬಿಡುವ ನಿರ್ಧಾರ ಕೈಬಿಟ್ಟರೇ ಕಮಲ್‌ ನಾಥ್?: ಜೈ ಶ್ರೀ ರಾಮ್‌ ಧ್ವಜ ತೆರವು!

12:34 AM Feb 20, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಗುಸುಗುಸು ನಡುವೆಯೇ ಸೋಮವಾರ ಅವರ ಮನೆಯ ಮೇಲೆ ಹಾರಾಡುತ್ತಿದ್ದ “ಜೈ ಶ್ರೀ ರಾಮ್‌’ ಎಂದು ಬರೆಯಲಾಗಿದ್ದ ಧ್ವಜವನ್ನು ತೆರವುಗೊಳಿಸಲಾಗಿದೆ. ಇದು ಅವರು ಕಮಲ ಪಕ್ಷವನ್ನು ಸೇರುವ ನಿರ್ಧಾರದಿಂದ ಹಿಂದೆ ಸರಿದರೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಕಮಲ್‌ನಾಥ್‌ ಅವರು ಬಿಜೆಪಿಗೆ ಸೇರಲ್ಲ, ಅವರು ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಪಕ್ಷವು ಸ್ಪಷ್ಟಪಡಿಸಿದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ. ರವಿವಾರ ಬೆಳಗ್ಗೆಯೇ ಕಮಲ್‌ ಅವರ ದಿಲ್ಲಿ ನಿವಾಸದ ಮೇಲೆ ಈ ಧ್ವಜ ಕಾಣಿಸಿಕೊಂಡಿತ್ತು.

Advertisement

ಚಿಂದ್ವಾರದಿಂದ ನಕುಲ್‌ ಸ್ಪರ್ಧೆ?
ಕಮಲ್‌ನಾಥ್‌ ಪುತ್ರ ನಕುಲ್‌ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳ ನಡುವೆಯೇ ಕಮಲ್‌ ಅವರ ಆಪ್ತ ಸಜ್ಜನ್‌ ವರ್ಮಾ ಸೋಮವಾರ, “ಇದೆಲ್ಲ ಬಿಜೆಪಿ ಹಬ್ಬಿಸಿದ ಸುಳ್ಳು ಸುದ್ದಿ’ ಎಂದಿದ್ದಾರೆ. ಅಲ್ಲದೇ, ನಕುಲ್‌ ಕಾಂಗ್ರೆಸ್‌ ಟಿಕೆಟ್‌ನಿಂದ ಚಿಂದ್ವಾರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next