Advertisement

Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್‌

12:14 AM Apr 22, 2024 | Team Udayavani |

ಮುಂಬಯಿ: ಶಿವಸೇನೆ(ಉದ್ಧವ್‌ ಬಣ) ಪಕ್ಷದ ಹೊಸ ಪ್ರಚಾರ ಗೀತೆಯಿಂದ “ಹಿಂದೂ’ ಮತ್ತು “ಜೈ ಭವಾನಿ’ ಪದಗಳನ್ನು ಕೈಬಿಡಬೇಕು ಎಂದು ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಆಯೋಗದ ಈ ಸೂಚನೆ ಪಾಲಿಸುವುದಿಲ್ಲ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, “ಪಕ್ಷದ ಗೀತೆಯಿಂದ “ಜೈ ಭವಾನಿ’ ಪದ ತೆಗೆದುಹಾಕುವುದು ಮಹಾರಾಷ್ಟ್ರಕ್ಕೆ ಮಾಡುವ ಅವಮಾನವಾಗಿದೆ. ನಾವು ಹಿಂದೂ ಧರ್ಮ ಅಥವಾ ದೇವತೆ ಹೆಸರಿನಲ್ಲಿ ಮತ ಕೇಳುತ್ತಿಲ್ಲ. ಇದೊಂದು ಅವಮಾನ. ನಾವು ಇದನ್ನು ಸಹಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next