Advertisement

ಹರ್ಷವರ್ಧನ್‌ ಗೆಲುವಿಗೆ ಮಹದೇವು ಅಳಿಯ ಪ್ರಚಾರ

12:38 PM Apr 29, 2018 | Team Udayavani |

ನಂಜನಗೂಡು: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದರ ಅಳಿಯ ಹರ್ಷವರ್ಧನ್‌ ಗೆಲುವಿಗಾಗಿ ಮಾಜಿ ಸಚಿವ ದಿವಂಗತ ಎಂ.ಮಹದೇವು ಅಳಿಯ ಜಯದೇವು ಪ್ರಚಾರಕ್ಕಿಳಿದಿದ್ದಾರೆ.

Advertisement

ಹೆಗ್ಗಡಳ್ಳಿ ಜಿಪಂ ವ್ಯಾಪ್ತಿಯ ಅಂಡುವಿನಹಳ್ಳಿ ದೇಬೂರು ಬೆಳಲೆ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹರ್ಷವರ್ಧನ್‌ ಮತ್ತು ಜಯದೇವು ಅವರು ಪಾದಯಾತ್ರೆ ನಡೆಸಿ ಮತ ಯಾಚಿಸಿದರು.

ರಾಜ್ಯದಲ್ಲಿನ ಸರ್ಕಾರದ ಬದಲಾವಣೆಗಾಗಿ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಬಿಜೆಪಿಗೆ ಮತ ನೀಡಿ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲು ನಂಜನಗೂಡಿನಲ್ಲಿ ತಾವರೆ ಅರಳಿಸಿ ಬಿಜೆಪಿ ಗೆಲ್ಲಿಸಿ ಇತಿಹಾಸ ಸೃಷ್ಟಿಸಿ ಎಂದು ಕೋರಿದರು.

ಪ್ರಚಾರಕ್ಕೆ ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ, ಇಬಾಲದ ಕೆಂಡಗಣ್ಣಪ್ಪ, ರಜಾಕ್‌, ಕೊಂಗಳ್ಳಿ ಬಸವರಾಜು, ಶಿರಮಳ್ಳಿ ಮಹದೇವಸ್ವಾಮಿ, ದೇವಿರಮ್ಮನಹಳ್ಳಿ ಬಸವರಾಜು, ಶಿವಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next