Advertisement

ಗ್ರಾಮೀಣ ಭಾಗಕ್ಕೂ ಕಾಲಿಟ್ಟ ಮಹಾಮಾರಿ

11:19 AM Jul 09, 2020 | Naveen |

ಹರಿಹರ: ತಾಲೂಕಿನ ಎಳೆಹೊಳೆ ಗ್ರಾಮದ 55 ವರ್ಷದ ಪುರುಷ ಹಾಗೂ ಕೊಂಡಜ್ಜಿ ಗ್ರಾಮದ 24 ವರ್ಷದ ಯುವಕನಿಗೆ ಕೋವಿಡ್ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.

Advertisement

ಕೊಂಡಜ್ಜಿ ಗ್ರಾಮದ ಯುವಕ ದಾವಣಗೆರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಅಂಗಡಿಯ ಮಾಲೀಕನಲ್ಲಿ ಇತ್ತೀಚಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕಿತನೆಂದು ಈ ಯುವಕನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಳೆಹೊಳೆ ಗ್ರಾಮದ ವ್ಯಕ್ತಿಯ ಸೋಂಕಿನ ಹಿನ್ನೆಲೆ ಇನ್ನೂ ತಿಳಿದುಬಂದಿಲ್ಲ. ಬುಧವಾರ ಈ ಎರಡೂ ಗ್ರಾಮಗಳಿಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ, ಸೋಂಕಿತರನ್ನು ದಾವಣಗೆರೆ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಅವರ ಸಂಪರ್ಕಿತರ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದರು.

ಇದುವರೆಗೆ ತಾಲೂಕಿನಲ್ಲಿ ಒಟ್ಟು 32 ಪ್ರಕರಣಗಳು ವರದಿಯಾಗಿದ್ದು, 22 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದಆದರೆ. 10 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಸಂಖ್ಯೆ ಏರುತ್ತಿರುವುದರಿಂದ ನಗರದಲ್ಲಿ ಮಂಗಳವಾರದಿಂದ ಮಧ್ಯಾಹ್ನ 2ರಿಂದ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next