Advertisement

Sedam: ಕಾಗಿಣಾ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ

03:22 PM Sep 04, 2024 | Team Udayavani |

ಸೇಡಂ: ತಾಲೂಕಿನ ಕುರಕುಂಟಾ ಗ್ರಾಮದ ನಿವಾಸಿ ರಾಜು ನರಸಪ್ಪ (38) ಮೀನು ಹಿಡಿಯಲು ಹೋಗಿ ಸಂಗಾವಿ (ಟಿ) ಸಮೀದ ಕಾಗಿಣಾ ನದಿಯ ನಾಲೆಯಲ್ಲಿ ಆ.31ರ ಶನಿವಾರ ಕೊಚ್ಚಿ ಹೋಗಿದ್ದು, ನಾಲ್ಕು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಕಳೆದ ಶನಿವಾರದಿಂದ ಅಗ್ನಿಶಾಮಕ ಹಾಗೂ ಎಸ್.ಡಿ.ಆರ್.ಎಫ್. ತಂಡ ಸತತ 4 ದಿನದಿಂದ ಶೋಧ ಕಾರ್ಯ ನಡೆಸುತಿತ್ತು. ಸೆ.4ರ ಬುಧವಾರ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಕೊಚ್ಚಿ ಹೋದ ರಾಜು ಮನೆಗೆ ಸೆ.3ರ ಮಂಗಳವಾರ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಭೇಟಿ ನೀಡಿದ್ದರು.

ಸೋಮವಾರ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next