Advertisement

Chincholi: ನದಿ ಹಿನ್ನೀರು ದಾಟುವ ವೇಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಸಾವು

02:46 PM Sep 03, 2024 | Team Udayavani |

ಚಿಂಚೋಳಿ: ವ್ಯಕ್ತಿಯೋರ್ವ ನದಿ ಹಿನ್ನೀರು ದಾಟುವ ವೇಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ನಡೆದಿದೆ.

Advertisement

ಚಿಮ್ಮನಚೋಡ ಗ್ರಾಮದ ಬಾಬು ಗುಂಡಪ್ಪ ನೂಲಕರ(52) ಮೃತಪಟ್ಟ ವ್ಯಕ್ತಿ.

ಬಾಬು ಗುಂಡಪ್ಪ ಸೆ.1ರ ರವಿವಾರ ರಾತ್ರಿ ತನ್ನ ‌ಮನೆಗೆ ಹೋಗುವ ದಾರಿಯಲ್ಲಿ ಸಣ್ಣ ಸೇತುವೆ ಮೇಲೆ ‌ಹಿನ್ನೀರು ದಾಟುವ ಸಂದರ್ಭದಲ್ಲಿ ಘಟನೆ ನಡೆದಿದೆ.

ರವಿವಾರ ದಿಂದ 2 ದಿನ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಮುಂಜಾನೆ  ಮುಲ್ಲಾಮಾರಿ‌ ನದಿ ದಡದಲ್ಲಿ ಶವ ಸಿಕ್ಕಿದೆ.

Advertisement

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಪಿಎಸ್‌ಐ ಗಂಗಮ್ಮ, ಕಂದಾಯ ನಿರಿಕ್ಷಕ ಆರೀಫ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next