Advertisement

ಜಟ್ಟಿಪಳ್ಳ : ಹಜ್‌ ಯಾತ್ರಿಕರಿಗೆ ಬಿಳ್ಕೊಡುಗೆ, ಸಮ್ಮಾನ

05:20 AM Jul 21, 2017 | Team Udayavani |

ಸುಳ್ಯ: ಹಜ್‌ ಯಾತ್ರಿಕರಿಗೆ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ  ಜಟ್ಟಿಪಳ್ಳ  ನಡೆಯಿತು. ಜಟ್ಟಿಪಳ್ಳ ಹಯಾತುಲ್‌ ಇಸ್ಲಾಂ ಕಮಿಟಿ ಆಶ್ರಯದಲ್ಲಿ, ಜಟ್ಟಿಪಳ್ಳ ನಾಗರಿಕರ ಸಹಭಾಗಿತ್ವದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕಮಿಟಿ ಕೋಶಾಧಿಕಾರಿ ಬಿ.ಎಂ. ಮಹಮ್ಮದ್‌, ವಕ್ಫ್ ಬೋರ್ಡ್‌ ಸದಸ್ಯ ಅಬ್ದುಲ್‌ ಕರೀಮ್‌ ಚೆನ್ನಾರ್‌ ಅವರನ್ನು ಬೀಳ್ಕೊಡಲಾಯಿತು. 

Advertisement

ಅನಿವಾಸಿ ಉದ್ಯಮಿ ವಿ.ಕೆ. ಮಹಮ್ಮದ್‌ ಮುನೀರ್‌, ಜಟ್ಟಿಪಳ್ಳ ಮದರಸ ಸದರ್‌ ಉಸ್ತಾದ್‌ ಅಸ್ಯಯದ್‌ ಅಹ್ಮದ್‌ ಖಾಸಿಂ ತಂಙಳ್‌, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್‌ ಜಟ್ಟಿಪಳ್ಳ  ಅವರನ್ನು ಸಮ್ಮಾನಿಸಲಾಯಿತು. 

ಕಾರ್ಯಕ್ರಮವನ್ನು ನಿಜಾರ್‌ ಸಖಾಫಿ ಅವರು ಉದ್ಘಾಟಿಸಿದರು. ಅಸಯ್ಯದ್‌ ಅಹ್ಮದ್‌ ಖಾಸಿಂ ತಂಙಳ್‌ ದುವಾ ನಿರ್ವಹಿ ಸಿದರು.  ಅಬೂಬಕ್ಕರ್‌ ಕೆ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. 

ಮಾಜಿ ಅಧ್ಯಕ್ಷ ಹಾಜಿ ಅಬೂಬಕ್ಕರ್‌ ವಿ.ಕೆ., ಹಾಜಿ ಮಹಮ್ಮದ್‌ ಬೊಳಿಯ ಮಜಲು, ಎನ್‌. ಎ. ಅಬ್ದುಲಾ, ಬಶೀರ್‌, ಕೆ.ಎಂ. ಮೂಸಾ, ಮಹಮ್ಮದ್‌ ಅಜ್ಮಿರಿಯಾ, ಸಮಿತಿ ಸದಸ್ಯ ಅಮೀರ್‌ ಎಸ್‌.ಎ., ಸಿ.ಎ. ಅಬ್ದುಲಾ, ಅಹಮದ್‌ ಕೆ.ಎಸ್‌., ರಜಾಕ್‌ ಬೀಜದಕಟ್ಟೆ, ಹೈದರಾಲಿ, ಬಶೀರ್‌ ಬಾಳೆಮಕ್ಕಿ, ಝುಭೆ„ರ್‌ ಬಾರಿಕ್ಕಾಡ್‌, ಗ್ರೀನ್‌ ಬಾಯ್ಸ  ಅಧ್ಯಕ್ಷ ಸಿಯಾಬ್ಬುದ್ದಿನ್‌ ಷಾ, ಬಿ.ಕೆ. ಹಮೀದ್‌, ಎಸ್‌.ಎ. ಶಂಶೀರ್‌, ಪೈಸಲ್‌ ಮುಂತಾದವರು ಉಪಸ್ಥಿತರಿದ್ದರು.

ಕಮಿಟಿ ಪ್ರ. ಕಾರ್ಯದರ್ಶಿ ಕಬೀರ್‌ ಜಟ್ಟಿಪಳ್ಳ ಸ್ವಾಗತಿಸಿ, ಎಂ.ಎಸ್‌. ತಾಜುದ್ದಿನ್‌ ಕಾರ್ಯಕ್ರಮ ಅವರು ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next