Advertisement

ಆಪ್‌ನಿಂದ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಹರ್ಭಜನ್‌

08:19 PM Mar 17, 2022 | Team Udayavani |

ನವದೆಹಲಿ: ಮಾಜಿ ವಿಶ್ವವಿಖ್ಯಾತ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಬಿಜೆಪಿ ಸೇರುವ ವದಂತಿ ಸುಳ್ಳಾಗಿದೆ. ಈಗಷ್ಟೇ ಪಂಜಾಬ್‌ನಲ್ಲಿ ಅಧಿಕಾರಕ್ಕೇರಿರುವ ಆಮ್‌ಆದ್ಮಿ ಪಕ್ಷದ ಮೂಲಕ ಅವರು ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ. ಇದನ್ನು ಆಪ್‌ ಸ್ವತಃ ಘೋಷಿಸಿದೆ.

Advertisement

ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಆಪ್‌ 5 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಹಾಗೆಯೇ ಭಗವಂತ್‌ ಮಾನ್‌ ಮುಖ್ಯಮಂತ್ರಿಯಾಗಿರುವ ಪಂಜಾಬ್‌ ಸರ್ಕಾರ; ಹರ್ಭಜನ್‌ಗೆ ಒಂದು ಕ್ರೀಡಾ ವಿಶ್ವವಿದ್ಯಾಲಯದ ಉಸ್ತುವಾರಿಯನ್ನೂ ನೀಡಲುದ್ದೇಶಿಸಿದೆ. ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಹರ್ಭಜನ್‌ ಸಿಂಗ್‌ ಬಿಜೆಪಿ ಸೇರುವ ನಿರೀಕ್ಷೆಯಿತ್ತು. ಅಷ್ಟು ಮಾತ್ರವಲ್ಲ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಜೊತೆಗೆ ಅವರು ತೆಗೆಸಿಕೊಂಡ ಚಿತ್ರದಿಂದ ಬೇರೆಯದ್ದೇ ಆದ ಲೆಕ್ಕಾಚಾರಗಳು ಶುರುವಾಗಿದ್ದವು. ಇದೀಗ ಎಲ್ಲ ಊಹಾಪೋಹಗಳಿಗೂ ತೆರೆಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next