Advertisement

ಹೆತ್ತವರ ಸಾಲಕ್ಕೆ ಮಗನಿಗೆ ಕಿರುಕುಳ; ಆತ್ಮಹತ್ಯೆಗೆ ಯತ್ನಿಸಿದ ಯುವಕ

10:25 PM Feb 10, 2024 | Team Udayavani |

ವಿಜಯಪುರ : ಪೋಷಕರು ಖಾಸಗಿ ಸಾಲ ಮಾಡಿದ್ದನ್ನು ತೀರಿಸಲು ವಿಳಂಬವಾಗಿದ್ದಕ್ಕೆ ಸಾಲಗಾರರು ಮಗನಿಗೆ ಕಿರುಕುಳ ನೀಡಿದ್ದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ವಿಜಯಪುರ ನಗರದ ಶಾಪೇಟೆ ನಿವಾಸಿ ಶಾರೂಖ್ ಸೌದಾಗರ್ ಎಂಬ ಯುವಕನೇ ಪೋಷಕರ ಸಾಲಕ್ಕೆ ತನಗೆ ನೀಡುತ್ತಿದ್ದ ಕಿರುಕುಳ ತಾಳದೇ ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ವಿಷ ಸೇವಿಸಿ ಆತ್ಮಹತ್ತೆಗೆ ಯತ್ನಿಸಿದ ಶಾರೂಖ್‍ನನ್ನು ಕೂಡಲೇ ಪೋಷಕರು ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ರುಬೀನಾ ಎಂಬ ಸ್ಥಳಿಯ ಮಹಿಳೆಯ ಬಳಿ ಶಾರೂಖ್‍ನ ಪೋಷಕರು ಸಾಲ ಪಡೆದಿದ್ದಾರೆ. ಸಾಲ ಪಡೆದ ಬಳಿಕ ಶಾರೂಖ್‍ನ ತಂದೆ ಮೆಹಬೂಬ್‍ಸಾಬ್ ಸಾಲ ಮರುಪಾತಿಸುವಲ್ಲಿ ವಿಳಂಬವಾಗಿದೆ. ಇದರಿಂದ ಕುಪಿತಗೊಂಡ ರುಬೀನಾ, ನಿನ್ನ ಪೋಷಕರು ಮಾಡಿರುವ ಸಾಲವನ್ನು ನೀನು ತೀರಿಸಬೇಕು ಎಂದು ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.

ವಿಷಯ ತಿಳಿಯುತ್ತಲೇ ಸರ್ಕಾರಿ ಆಸ್ಪತ್ರೆಗೆ ಧಾವಿಸಿರುವ ವಿಜಯಪುಎ ಎಪಿಎಂಸಿ ಠಾಣೆ ಪೊಲೀಸರು, ಚಿಕಿತ್ಸೆ ಪಡೆಯುತ್ತಿರುವ ಶಾರುಖ್‍ನಿಂದ ಪ್ರಾಥಮಿಕ ಮಾಹಿತಿ ಪಡೆದಿದ್ದು, ಲಿಖಿತ ದೂರು ಪಡೆಯಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next