Advertisement

ನನಗೆ ಯಾರೂ ಲೈಂಗಿಕ ಕಿರುಕುಳ ಕೊಟ್ಟಿಲ್ಲ; ಕಿರುತೆರೆ ನಟಿ ನಿರುಷಾ

01:39 PM Jan 30, 2017 | Sharanya Alva |

ಬೆಂಗಳೂರು:ಕಂಠಪೂರ್ತಿ ಕುಡಿದು ದರ್ಶನ್ ಮತ್ತು ಆತನ ಗ್ಯಾಂಗ್ ಧಾರವಾಹಿ ನಟಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಭಾನುವಾರ ತಡರಾತ್ರಿ ವಿಠಲಮಲ್ಯ ರಸ್ತೆ ಬಳಿ ಇರುವ ಸ್ಕೈಬಾರ್ ವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಟಿವಿ9 ವರದಿ ತಿಳಿಸಿದೆ.

Advertisement

ಸ್ಕೈಬಾರ್ ನಲ್ಲಿ ದರ್ಶನ್ ಕಂಠಪೂರ್ತಿ ಕುಡಿದು, ತಡರಾತ್ರಿ 1.20ರ ಸುಮಾರಿಗೆ ಆಗಮಿಸಿದ್ದ ಸರ್ಪಸಂಬಂಧ ಎಂಬ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದ ನಟಿ ಮೈಮೇಲೆ ಕೈ ಹಾಕಿದ್ದ. ಆಗ ಕೈಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ದರ್ಶನ್ ಆಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದ ಎಂದು ವರದಿ ವಿವರಿಸಿದೆ.

ಈ ಘಟನೆ ನಡೆದಾಗ ದರ್ಶನ್ ಗೆ ನಟಿಯ ಸ್ನೇಹಿತರು ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ದರ್ಶನ್ ತನ್ನ ಸ್ನೇಹಿತರನ್ನು ಕರೆಯಿಸಿಕೊಂಡಿದ್ದ, ಆಗ ದಾಗ ಉಭಯ ತಂಡಗಳ ನಡುವೆ ಮಾರಾಮಾರಿ ನಡೆದಿತ್ತು.

ಬಳಿಕ ಯುವತಿ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಳು. ವಿಷಯ ತಿಳಿದ ಇನ್ಸ್ ಪೆಕ್ಟರ್ ನಾಗರಾಜ್ ಎಲ್ಲರನ್ನೂ ಠಾಣೆಗೆ ಕರೆತಂದಿದ್ದರು. ನಂತರ ಇನ್ಸ್ ಪೆಕ್ಟರ್ ದರ್ಶನ್ ತಂದೆ ಬಿಲ್ಡರ್ ಶ್ರೀನಿವಾಸ್ ಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ, ಶ್ರೀನಿವಾಸ್ ಠಾಣೆಗೆ ಬಂದು ಕಾಂಪ್ರಮೈಸ್ ಮಾಡಿಸಿದ್ದರು ಎಂದು ವರದಿ ವಿವರಿಸಿದೆ. 

ನನಗೆ ಲೈಂಗಿಕ ಕಿರುಕುಳ ಕೊಟ್ಟಿಲ್ಲ: ನಟಿ ನಿರುಷಾ ಆರ್

Advertisement

ನನಗೆ ಬಿಲ್ಡರ್ ಶ್ರೀನಿವಾಸ್ ಪುತ್ರ ದರ್ಶನ್ ನಿಂದ ಯಾವುದೇ ಲೈಂಗಿಕ ಕಿರುಕುಳ ಆಗಿಲ್ಲ. ನನಗೆ ಕಚ್ಚಿಲ್ಲ. ಸ್ಕೈಬಾರ್ ನಲ್ಲಿ ಜಗಳ ಆಗಿರುವುದು ನಿಜ. ಇದರಿಂದ ಹೆದರಿ ನಾನು ಪೊಲೀಸರಿಗೆ ದೂರು ನೀಡಿದ್ದೆ. ನಾವೆಲ್ಲರು ಗೆಳೆಯರೇ ಆಗಿದ್ದೇವೆ. ನಂತರ ನಾವು ಅದನ್ನು ರಾಜೀ ಮಾಡಿಕೊಂಡಿದ್ದೇವೆ. ಅದು ಬಿಟ್ಟು ನಾನು ಯಾವುದೇ ಹಣ ತೆಗೆದುಕೊಂಡು ರಾಜೀ ಮಾಡಿಕೊಂಡಿಲ್ಲ ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜೀ ಸಂಧಾನ ನಡೆದಿಲ್ಲ:

ಪ್ರಕರಣ ಸಂಬಂಧ ಪೊಲೀಸರಿಂದ ಯಾವುದೇ ರಾಜೀ ಸಂಧಾನ ನಡೆದಿಲ್ಲ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next