Advertisement

ಹರಪನಹಳ್ಳಿ: ರಸ್ತೆ ಬದಿ ಬಿಸಾಕಿ ಹೋಗಿದ್ದ ನವಜಾತು ಶಿಶುವಿನ ರಕ್ಷಣೆ

11:34 AM Nov 17, 2021 | Team Udayavani |

ಹರಪನಹಳ್ಳಿ: ರಸ್ತೆ ಬದಿ ಬೇಲಿಯಲ್ಲಿ ಬಿಸಾಕಿ ಹೋಗಿದ್ದ ನವಜಾತು ಶಿಶುವನ್ನು ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Advertisement

ಆಗತಾನೆ ಹುಟ್ಟಿದ ಗಂಡು ಶಿಶುವನ್ನು ಕಟುಕರು ರಸ್ತೆ ಬದಿಯ ಬೇಲಿಯಲ್ಲಿ ಬಿಸಾಕಿ ಹೋಗಿದ್ದರು, ಮಗು ಅಳುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹತ್ತಿರಕ್ಕೆ ಹೋಗಿ ನೋಡಿದಾದ್ದಾರೆ. ನಾಯಿಗಳು ಮಗುವಿನ ಸುತ್ತ ಸುಳಿದಾಡುವುದನ್ನು ಕಂಡು ಕೂಡಲೇ ನಾಯಿಗಳಿಂದ ಶಿಶುವನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ನವಜಾತ ಶಿಶುವನ್ನು ಬಿಸಾಕಿ ಹೋಗಿದ್ದ ಪೋಷಕರ ವಿರುದ್ದ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next