Advertisement

ಕೋವಿಡ್ ಅನಗತ್ಯ ಭಯ ಬೇಡ: ರಾಜೇಶ್‌

05:15 PM Apr 26, 2020 | Naveen |

ಹರಪನಹಳ್ಳಿ: ವೈರಸ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳ ಬಗ್ಗೆ ಯಾರೂ ಕಿವಿಗೊಡಬಾರದು. ಕೋವಿಡ್ ತಡೆಗೆ ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಚ್‌.ಪಿ.ರಾಜೇಶ್‌ ಹೇಳಿದರು.

Advertisement

ಉಚ್ಚಂಗಿದುರ್ಗ ಗ್ರಾಮದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಟಾಸ್ಕ್ಫೋರ್ಸ್‌ ಸಮಿತಿ ಮತ್ತು ಅರಸೀಕೆರೆ ಬ್ಲಾಕ್‌ ಕಾಂಗ್ರೆಸ್‌ ಟಾಸ್ಕ್ಫೋರ್ಸ್‌ ಸಮಿತಿ ವತಿಯಿಂದ ಕೊಪ್ಪಳ, ದಾವಣಗೆರೆ, ಅಣಜಿ ವ್ಯಾಪಾರಸ್ಥರಿಗೆ ಪಡಿತರ ಕಿಟ್‌ ವಿತರಿಸಿ ಮಾತನಾಡಿದರು. ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಟಾಸ್ಕ್ಫೋರ್ಸ್‌ ಸಮಿತಿ ಅಧ್ಯಕ್ಷರಾದ ಕೆ.ಎಂ. ಶಿವಕುಮಾರಸ್ವಾಮಿ, ಎಚ್‌.ಕೆ. ಹಾಲೇಶ್‌, ಅರಸೀಕೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌. ಮಂಜುನಾಥ್‌, ಗ್ರಾಪಂ ಅಧ್ಯಕ್ಷೆ ಎಂ.ಎಂ. ಅಶ್ವಿ‌ನಿ ಚಂದ್ರಪ್ಪ, ಎಂ.ಟಿ. ಬಸವನಗೌಡ, ಟಿ. ಮಂಜಪ್ಪ, ಎ.ಬಿ. ಆಂಜನೇಯ, ರೆಡ್ಡಿಬಸರಾಜಗೌಡ, ಯರಬಳ್ಳಿ ಉಮಾಪತಿ, ಸಲಾಂಸಾಬ್‌, ಬೇವಿನಹಳ್ಳಿ ಸಿದ್ಧಲಿಂಗನಗೌಡ, ಲಕ್ಷ್ಮೀ ನಾರಾಯಣಶೆಟ್ಟಿ, ಕರಿಬಸಪ್ಪ, ಸಿದ್ದಪ್ಪ, ಕುಮಾರ್‌, ಪೂಜಾರ್‌ ಅಂಜಿನಪ್ಪ, ಟಿ.ನಾಗರಾಜ್‌, ಅಜಮ ತುಲ್ಲಸಾಬ್‌, ಎ.ಅಂಕಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next