Advertisement

ಶ್ರೀರಾಮನಾಮ ಬರೆಯುತ್ತಿರುವ ಹನುಮಂತ

07:00 AM Mar 26, 2018 | |

ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರು ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನಾಮ ಬರೆಯುತ್ತಿರುವ ಭಂಗಿಯಲ್ಲಿರುವ ಅಪರೂಪದ ಆಂಜನೇಯ ವಿಗ್ರಹವನ್ನು ರಾಮ ನವಮಿ ದಿನವಾದ ಭಾನುವಾರ ಪ್ರತಿಷ್ಠಾಪಿಸಲಾಗಿದೆ.

Advertisement

ಈ ವಿಗ್ರಹ ಹನುಮಂತ ಶ್ರೀರಾಮನಾಮ ಬರೆಯುತ್ತಿರುವ ಭಂಗಿಯಲ್ಲಿದೆ. ಇದರೊಟ್ಟಿಗೆ ಹನುಮಂತ ತನ್ನ ಹೃದಯವನ್ನು ಬಗೆದು ಅಲ್ಲಿ ಶ್ರೀರಾಮ, ಸೀತಾ ಮತ್ತು ಲಕ್ಷ ಣರನ್ನು ತೋರುತ್ತಿರುವ ಚಿತ್ರವೂ ಇದೆ. ಆಂಜನೇಯನ ಈ ಭಂಗಿಯ ವಿಗ್ರಹವು ಇಡೀ ದೇಶದಲ್ಲಿ ಎಲ್ಲಿಯೂ ಇರುವ ಬಗ್ಗೆ ಮಾಹಿತಿ ಇಲ್ಲ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ತಿಳಿಸಿದ್ದಾರೆ. ಭಕ್ತರ ಸಹಾಯದಿಂದ ಈ ವಿಗ್ರಹ ಮಾಡಿಸಲಾಗಿದ್ದು,ಚಿಕ್ಕನಾಯಕನಹಳ್ಳಿಯ ಶಿಲ್ಪಿ ವಿಶ್ವನಾಥ ವಿಗ್ರಹ ಕೆತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next