Advertisement

ಮೆರವಣಿಗೆಯಲ್ಲಿ ತೆರಳಿ ಹನುಮನ ದರ್ಶನ

06:44 AM Jun 14, 2020 | Suhan S |

ಮೂಡಲಗಿ: ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಈರಣ್ಣ ಕಡಾಡಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

Advertisement

ಪಟ್ಟಣಕ್ಕೆ ಆಗಮಿಸಿದ ಕಡಾಡಿ ಅವರು ಹನುಮಾನ ದೇವಸ್ಥಾನಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆರಳಿ ದೇವರ ದರ್ಶನ ಪಡೆದುಕೊಂಡರು. ನಂತರ ಬಸವೇಶ್ವರ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿ, ಸಾಧಾರಣ ಕಾರ್ಯಕರ್ತರನ್ನು ಗುರುತಿಸಿ ದೇಶದ ಅತ್ಯುನ್ನತ ಪವಿತ್ರ ರಾಜ್ಯಸಭೆಗೆ ಆಯ್ಕೆ ಮಾಡುವ ಮುಖಾಂತರ ಪಕ್ಷವು ಕಾರ್ಯಕರ್ತ ಪರವಾಗಿ ಇದೆ ಎಂಬ ಸಂದೇಶವನ್ನು ವರಿಷ್ಠರು ನೀಡಿದ್ದಾರೆ ಎಂದರು.

ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ, ಬಸವೇಶ್ವರ ಅರ್ಬನ್‌ ಸೌಹಾರ್ದ ಸಹಕಾರಿ ಅಧ್ಯಕ್ಷ ಬಾಳಪ್ಪ ಬೆಳಕೂಡ, ನಾಗಪ್ಪ ಶೇಖರಗೋಳ, ಬಸಪ್ಪ ದಾಸನಾಳ, ಸುಭಾಸ ಕುರಬೇಟ, ಹನಮಂತ ತೇರದಾಳ, ಈರಪ್ಪ ಹೆಬ್ಟಾಳ, ಪ್ರಕಾಶ ಬಾಗೇವಾಡಿ, ಸುರೇಶ ಕಬ್ಬೂರ, ಪ್ರಕಾಶ ಮಾದರ, ಸುಭಾಸ ಪಾಟೀಲ, ಈರಣ್ಣ ಅಂಗಡಿ, ಬಸಪ್ಪ ಹುಳೆರ, ಶಾಮಾನಂದ ಪೂಜೇರಿ, ಅಶೋಕ ಚಂದ್ರಪ್ಪಗೋಳ, ರಾವಸಾಬ ಬೆಳಕೂಡ, ಮಹಾಂತೇಶ ಕಪಲಗುದ್ದಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next