Advertisement

Hang: ಮಹಿಳೆಯ ಹಂತಕನಿಗೆ ಗಲ್ಲು

12:59 AM May 20, 2023 | Team Udayavani |

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ, ಬಳಿಕ ಆಕೆಯನ್ನು ಪೆಟ್ರೋಲ್‌ ಸುರಿದು ಕೊಂದಿರುವ ಆರೋಪ ಸಾಬೀತಾಗಿದ್ದು, ಆತನಿಗೆ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

Advertisement

2018ರ ಜ.27ರಂದು ಸಿಂದಗಿ ಠಾಣೆ ವ್ಯಾಪ್ತಿಯ ಕೊಕಟನೂರು ಗ್ರಾಮದಲ್ಲಿ ಮೂತ್ರ ವಿಸರ್ಜನೆ ಮಾಡುವ ವಿಷಯದಲ್ಲಿ ಶಮಶಾದ್‌ ಮಕಾನದಾರ ಹಾಗೂ ಅಕºರಬಾಷಾ ಬಾಗವಾನ ಮಧ್ಯೆ ಜಗಳ ನಡೆದಿತ್ತು. ಅದೇ ದಿನ ಸಂಜೆ ಶಮಶಾದ ಅಕºರ್‌ ಮಕಾನದಾರ ತನ್ನ ಮಗಳು ಕೌಸರಬಿ ಜತೆ ಮನೆ ಮುಂದೆ ಕುಳಿತಿದ್ದಾಗ ಪಕ್ಕದ ಮನೆಯ ನಿವಾಸಿ ಅಕºರಬಾಷಾ ಬಾಗವಾನ ಏಕಾಏಕಿ ಆಗಮಿಸಿ ಶಮಶಾದ್‌ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶಮಶಾದ 2018ರ ಫೆ.15ರಂದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಕರಣದ ವಿಚಾರಣೆ ವಿಜಯಪುರ ಜಿಲ್ಲಾ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶ ಸತೀಶ ಎಲ್‌.ಪಿ. ಆರೋಪಿ ಅಕºರಸಾಬ್‌ಗ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ಇತರ 3 ಕಲಂಗಳಿಗೆ ಸಂಬಂ ಧಿಸಿ ಪ್ರತ್ಯೇಕವಾಗಿ 2 ವರ್ಷ ಜೈಲು ಶಿಕ್ಷೆ ಹಾಗೂ 9 ಸಾವಿರ ರೂ. ದಂಡ ವಿ ಧಿಸಿದ್ದಾರೆ. ಮೃತ ಮಹಿಳೆಯ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಒಂದನೇ ಅಧಿಕ ಸರಕಾರಿ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next