Advertisement

ಸಿಟ್ಟಿನಿಂದ ಬ್ಯಾಟ್‌ಗೆ ಬಡಿದು ಕೈ ಮುರಿದುಕೊಂಡ ಕಾನ್ವೆ !

10:16 PM Nov 12, 2021 | Team Udayavani |

ದುಬಾೖ: ನ್ಯೂಜಿಲ್ಯಾಂಡಿನ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಡೇವನ್‌ ಕಾನ್ವೆ ಟಿ20 ವಿಶ್ವಕಪ್‌ ಫೈನಲ್‌ ಹಾಗೂ ಅನಂತರದ ಭಾರತ ಪ್ರವಾಸದಿಂದ ಹೊರಗುಳಿಯಲಿದ್ದಾರೆ.

Advertisement

ಇಂಗ್ಲೆಂಡ್‌ ಎದುರಿನ ಸೆಮಿಫೈನಲ್‌ ಪಂದ್ಯದ ವೇಳೆ ಔಟಾದ ಸಿಟ್ಟಿಗೆ ಕೈಯನ್ನು ಬ್ಯಾಟಿಗೆ ಬಡಿದುದರ ಪರಿಣಾಮವಿದು. ಈ ಸಂದರ್ಭದಲ್ಲಿ ಅವರ ಬಲಗೈ ಮೂಳೆಯಲ್ಲಿ ಬಿರುಕು ಮೂಡಿದೆ!

ಫೈನಲ್‌ ಪಂದ್ಯಕ್ಕಾಗಿ ನ್ಯೂಜಿಲ್ಯಾಂಡ್‌ ಬದಲಿ ಆಟಗಾರನನ್ನು ಸೇರಿಸಿಕೊಳ್ಳದಿರಲು ನಿರ್ಧರಿಸಿದೆ. ಟಿಮ್‌ ಸೀಫ‌ರ್ಟ್‌ ಕೀಪಿಂಗ್‌ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next