Advertisement

ವಿಜಯಪುರದಲ್ಲಿ ಮುಂದುವರಿದ ಮಳೆಯಬ್ಬರ: ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ರೈತ

02:15 PM Oct 15, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹೊಲಕ್ಕೆ ಹೊರಟಿದ್ದ ರೈತನೊಬ್ಬ ಹಳ್ಳದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಘಟನೆ ಗುರವಾರ ನಡೆದಿದೆ. ರೈತನಿಗಾಗಿ ಶೋಧಕಾರ್ಯ ಮುಂದುವರಿದಿದೆ.

Advertisement

ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಶಿವಪುತ್ರ ಹನುಮಂತ ನಾಡೀಕರ ಎಂಬ 35 ವರ್ಷದ ರೈತನೇ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಸತತ ಮಳೆ ಸುರಿಯುತ್ತಿರುವ ಕಾರಣ ಜಮೀನಿನಲ್ಲಿ ಬೆಳೆಯ ಸ್ಥಿತಿಗತಿ ಅರಿಯಲು ಗುರುವಾರ ಬೆಳಿಗ್ಗೆ ಜಮೀನಿಗೆ ಹೊರಟಿದ್ದ.
ಈ ಹಂತದಲ್ಲಿ ಹೊಲದ‌ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ಹಂತದಲ್ಲಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಸುದ್ದಿ ತಿಳಿಯುತ್ತಲೇ ಸ್ಥಳೀಯರ ಸಹಾಯದಿಂದ ಅಧಿಕಾರಿಗಳು ಜೆಸಿಬಿ ಬಳಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

 

Advertisement

ಮತ್ತೊಂದೆಡೆ ಅಗ್ನಿಶಾಮಕ ಸೇವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ರೈತನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಶಿವಪುತ್ರ ಕಾಣೆಯಾದ ಮಾಹಿತಿ ತಿಳಿಯುತ್ತಲೇ ಆತನ ಕುಟುಂಬದಲ್ಲಿ ಆಕ್ರಂದನ‌ ಮುಗಿಲು ಮುಟ್ಡಿದೆ.

ಇದನ್ನೂ ಓದಿ:ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತ! ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಸುದ್ದಿ ತಿಳಿಯುತ್ತಲೇ ದೇವರಹಿಪ್ಪರಗಿ ತಹಶಿಲ್ದಾರರ ಖಡಕಭಾವಿ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯದ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next