Advertisement

ಹಾಫ್‌ ಮ್ಯಾರಥಾನ್‌: 3,500 ಮಂದಿ ಭಾಗಿ

05:39 AM Jan 20, 2019 | Team Udayavani |

ಸುಳ್ಯ: ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ರಾಜ್ಯ, ಜಿಲ್ಲಾ ಘಟಕ ಹಾಗೂ ಕೆವಿಜಿ ಸಮೂಹ ಸಂಸ್ಥೆಗಳ ಆಶ್ರ ಯದಲ್ಲಿ ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌ ವತಿಯಿಂದ ಶನಿವಾರ ನಡೆದ ರಾಜ್ಯಮಟ್ಟದ ಹಾಫ್‌ ಮ್ಯಾರಥಾನ್‌ ಸಮಾರೋಪ ಸಮಾರಂಭ ಎನ್‌ಎಂಸಿ ಮೈದಾನ ದಲ್ಲಿ ನಡೆಯಿತು.

Advertisement

ಆ್ಯತ್ಲೆಟಿಕ್ಸ್‌ ಫೆಡರೇಶನ್‌ ಆಫ್‌ ಇಂಡಿಯಾದ ಕಾರ್ಯಕಾರಿ ಸದಸ್ಯ ಚಂದ್ರಶೇಖರ ರೈ ಮಾತನಾಡಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಬಹುತೇಕ ಸಾಧಕರು ಗ್ರಾಮಾಂತರ ಪ್ರದೇಶವರು. ಉತ್ತಮ ಮಾರ್ಗದರ್ಶನ, ಪರಿಶ್ರಮ, ಪ್ರತಿಭೆಗೆ ತಕ್ಕ ಅವಕಾಶಗಳನ್ನು ಸೃಷ್ಟಿಸಿದರೆ ಸುಳ್ಯದಿಂದಲೂ ಅನೇಕ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸಲು ಸಾಧ್ಯವಿದೆ ಎಂದರು.

ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಕುಶಾಲಪ್ಪ ಗೌಡ ನಾಳ ಅವರನ್ನು ಸಮ್ಮಾನಿಸಲಾಯಿತು. ರಾಜ್ಯಮಟ್ಟದ ಹಾಫ್‌ ಮ್ಯಾರಥನ್‌ ಯಶಸ್ಸಿಗೆ ಶ್ರಮಿಸಿದ ಅಕ್ಷಯ್‌ ಕೆ.ಸಿ., ಮಹಮ್ಮದ್‌ ಶಾಫಿ, ಅತಿಥಿಗಳಾದ ಕುರಿಯನ್‌ ಮ್ಯಾಥ್ಯೂ, ಚಂದ್ರಶೇಖರ ರೈ ಅವರನ್ನು ಸಮ್ಮಾನಿಸಲಾಯಿತು.

ಎಓಎಲ್‌ಇ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಸಭಾಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಫಾಸ್ಟ್‌ಟ್ರಾಕ್‌ ಮ್ಯಾನೆಜಿಂಗ್‌ ಡೈರೆಕ್ಟರ್‌ ಮಹಮ್ಮದ್‌ ಶಾಫಿ, ಯುವಜನ ಸೇವಾ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್‌ ಬಾಬ್ಲುಬೆಟ್ಟು, ಅಂತಾರಾಷ್ಟ್ರೀಯ ಸಫರ್ರ್‌ ತನ್ವಿ ಜಗದೀಶ್‌, ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮಾಯಿಲಪ್ಪ ಗೌಡ ಉಪಸ್ಥಿತರಿದ್ದರು.

ಅನಘ ಉಬರಡ್ಕ ಪ್ರಾರ್ಥಿಸಿದರು. ಲಕ್ಷ್ಮೀಶ ರೈ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕೆ.ಎಂ. ವಂದಿಸಿದರು. ತುಕಾರಾಮ ಏನೆಕಲ್ಲು ಬಹುಮಾನಿತರ ಪಟ್ಟಿ ವಾಚಿಸಿದರು. ಕಿಶೋರ್‌ ಕುಮಾರ್‌ ಉಳುವಾರು, ಸುಶ್ಮಿತಾ ಕಡಪಳ, ಬೇಬಿವಿದ್ಯಾ ನಿರೂಪಿಸಿದರು.

Advertisement

ಉದ್ಘಾಟನೆ:
ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌, ದಕ್ಷಿಣ ಕನ್ನಡ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಮತ್ತು ಕೆ.ವಿ.ಜಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ವತಿಯಿಂದ ರಾಜ್ಯಮಟ್ಟದ ಹಾಫ್‌ ಮ್ಯಾರಥಾನ್‌ ಸುಳ್ಯದ ಕೆ.ವಿ.ಜಿ ಕ್ರೀಡಾಂಗಣ ದಲ್ಲಿ ನಡೆಯಿತು.

ಬೆಳಗ್ಗೆ ಕರ್ನಾಟಕ ರಾಜ್ಯ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಎನ್‌. ಮುತ್ತಪ್ಪ ರೈ ಉದ್ಘಾಟಿಸಿದರು. ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ|ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ನಿರ್ದೇಶಕ ಅಕ್ಷಯ್‌ ಕೆ.ಸಿ., ಭಾರತೀಯ ಕ್ರೀಡಾ ಪ್ರಾಧಿಕಾರದ ಮುಖ್ಯ ಆ್ಯತ್ಲೆಟಿಕ್ಸ್‌ ತರಬೇತುದಾರ ಕುರಿಯನ್‌ ಮ್ಯಾಥ್ಯೂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅರಂತೋಡು ಪಾಪ್ಯುಲರ್‌ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮಾಯಿಲಪ್ಪ ಗೌಡ ಕೊಂಬೆಟ್ಟು, ಅಂತಾರಾಷ್ಟ್ರೀಯ ಕ್ರೀಡಾಪಟು ತನ್ವಿ ಜಗದೀಶ್‌, ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ತಾರನಾಥ್‌ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜಗದೀಶ್‌ ಉಪಸ್ಥಿತರಿದ್ದರು.

ಮೈದಾನ, ವ್ಯಾಯಾಮ ಕೇಂದ್ರ ಸ್ಥಾಪಿಸಿ:
ಭಾರತೀಯ ಕ್ರೀಡಾ ಪ್ರಾಧಿಕಾರದ ಮುಖ್ಯ ಆ್ಯತ್ಲೆಟಿಕ್ಸ್‌ ತರಬೇತುದಾರ ಕುರಿಯನ್‌ ಮ್ಯಾಥ್ಯೂ ಮಾತನಾಡಿ, ಆರೋಗ್ಯ ವೃದ್ಧಿಗೆ ಬೇಕಿರುವುದು ಆಸ್ಪತ್ರೆಗಳು ಅಲ್ಲ. ಬದಲಿಗೆ ಮೈದಾನ, ದೈಹಿಕ ಕ್ಷಮತೆ ಕಾಪಾಡಲು ಪೂರಕವಾಗಿ ವ್ಯಾಯಾಮ ಕೇಂದ್ರಗಳು. ಅವುಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಬೇಕು. ಕೆವಿಜಿ ಸಂಸ್ಥೆ ವತಿಯಿಂದ ಎನ್‌ಎಂಸಿ ಕ್ರೀಡಾ ಮೈದಾನದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸ್ಥಾಪಿಸಬೇಕು. ಸರಕಾರದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲು ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು. ಈ ಮೂಲಕ ಸುಳ್ಯದ ಪ್ರತಿಭೆಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಲು ಅವಕಾಶ ದೊರೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next