Advertisement

H. D. Kumaraswamy ಮಂಡ್ಯ ಸ್ಪರ್ಧೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ: ಭೋಜೇಗೌಡ

09:49 PM Jan 10, 2024 | Team Udayavani |

ಚಿಕ್ಕಮಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಬಂದಿದ್ದಾರೆಂದರೆ ಎಲ್ಲರೂ ಬರುತ್ತಾರೆ ಪುಟ್ಟರಾಜು, ಸಾ.ರಾ.ಮಹೇಶ್ ಅವರನ್ನು ನಾನೇ ಕರೆದಿದ್ದೆ ಮಂಡ್ಯ ಸ್ಪರ್ಧೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದರು‌.

Advertisement

ಸುದ್ದಿಗಾರರ ಜತೆ ಮಾತನಾಡಿ ಅವರು, ಕುಮಾರಣ್ಣನ ಜತೆ ಕೂತಾಗ ರಾಜಕೀಯ ಮಾತನಾಡುವುದು ಸಹಜ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಿಲ್ಲಬೇಕು ಅಂತ ಹೇಳುತ್ತಿಲ್ಲ. ನಮ್ಮ ಕಾರ್ಯಕರ್ತರು, ಲೀಡರ್ ಗಳು ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ನಿಲ್ಲಬೇಕೆಂದು ಒತ್ತಾಯಿಸಿದ್ದಾರೆ ಎಂದರು.

ಎಲ್ಲೆಲ್ಲಿ ನಿಲ್ಲಬೇಕೆಂದು ಚರ್ಚೆ ನಡೆಯುತ್ತಿದೆ. ನಮಗೆ ಎಲ್ಲಿ ಶಕ್ತಿ ಇದೆ ಅಲ್ಲಿ ಬಿಜೆಪಿ ಅಭ್ಯರ್ಥಿಗ ಳಿಗೆ ಧಾರೆ ಎರೆಯಬೇಕು ಅಂತ ಚರ್ಚೆ ಆಗಿದೆ. ದೊಡ್ಡವರ ಲೆವೆಲ್‌ನಲ್ಲಿ ಕಾರ್ಯಕರ್ತರು ಒಂದಾಗಬೇಕೆಂಬ ಅಳಲು ಇದೆ. ಕಾರ್ಯಕರ್ತರು ಒಗ್ಗೂಡಲಿಲ್ಲ ಎಂದರೆ ದೊಡ್ಡಮಟ್ಟದ ಪ್ರಯೋಜನ ಆಗಲ್ಲ.ಸಂಕ್ರಾಂತಿ ಅಂತ ಹೇಳಿದ್ದರಲ್ಲ ಅವಾಗ ಶುಭ ಸುದ್ದಿ ಬರಬಹುದು ಎಂದರು.

ಮಂಡ್ಯ, ಹಾಸನ ನಮಗೆ ವೆಲ್ ಬೇಸ್ಡ್, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಬೇಕೋ, ಹಾಲಿ ಸಂಸದರಿಗೆ ನೀಡಬೇಕೋ ಎಂಬ ಚರ್ಚೆ ಇನ್ನೂ ಬಂದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next