Advertisement

ಗುರುಪೂರ್ಣಿಮೆ :ತಮಿಳುನಾಡಿನ ಭಕ್ತರು ಕೊಲ್ಲೂರಿಗೆ

01:11 PM Jul 28, 2018 | Team Udayavani |

ಕೊಲ್ಲೂರು: ಗುರು ಪೂರ್ಣಿಮೆ ಅಂಗವಾಗಿ ತಮಿಳುನಾಡಿನಿಂದ ಆಗಮಿಸಿದ 3ಸಾವಿರಕ್ಕೂ ಮಿಕ್ಕಿ ಭಕ್ತರು ಸೌಪರ್ಣಿಕಾ ಸ್ನಾನಘಟ್ಟದಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ಕೊಲ್ಲೂರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು.

Advertisement

ಕಳೆದ ಹಲವು ವರ್ಷಗಳಿಂದ ಗುರುಪೂರ್ಣಿಮಾ ದಿನದಂದು ಕೊಲ್ಲೂರಿಗೆ ಆಗಮಿಸುವ ಪರಂಪರೆ ಹೊಂದಿರುವ ತಮಿಳುನಾಡಿನ ಭಕ್ತರಿಗೆ ಸೌಕರ್ಯ ಒದಗಿಸಲಾಗಿದೆ. ಕೆಂಪು ಪಂಚೆ ಹಾಗೂ ಕೆಂಪು ಶಾಲು ಹೊತ್ತ ಪುರುಷರು ಹಾಗೂ ಕೆಂಪು ಸೀರೆ ಧರಿಸಿ ಆಗಮಿಸಿದ ಮಹಿಳೆಯರ ಬೃಹತ್‌ ಗುಂಪು ಗಮನ ಸೆಳೆಯಿತು. ಶ್ರೀ ದೇವಿಗೆ ನಾನಾ ಅಲಂಕಾರಗಳೊಡನೆ ಸೀರೆ ಸಹಿತ ಕಾಣಿಕೆ ರೂಪದಲ್ಲಿ ಚಿನ್ನಾಭರಣವನ್ನು ನೀಡುವುದರ ಮೂಲಕ ಹರಕೆ ಪೂರೈಸಿದರು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ, ಸಮಿತಿ ಸದಸ್ಯರಾದ ರಮೇಶ್‌ ಗಾಣಿಗ ಕೊಲ್ಲೂರು,  ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ ಸಹಿತ ಅರ್ಚಕರು ಉಪಸ್ಥಿತರಿದ್ದು ಆಗಮಿಸಿದ ಭಕ್ತರಿಗೆ ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next