Advertisement

ಗುರು –ಶಿಷ್ಯರ ಸಂಬಂಧ ಅತ್ಯಂತ ಮಹತ್ವದ್ದು :ಅಯ್ಯರ್‌

02:05 AM Jul 11, 2017 | Karthik A |

ಕೊಡಿಯಾಲ್‌ಬೈಲ್‌: ಗುರು ಶಿಷ್ಯರ ಸಂಬಂಧ ಪರಂಪರಾಗತವಾಗಿ ಬಂದಿರುವಂಥದ್ದಾಗಿದ್ದು,ಈ ಸಂಬಂಧ ಅತ್ಯಂತ ಮಹತ್ವವನ್ನು ಪಡೆದಿದೆ. ಗುರುವಿಲ್ಲದ ಬದುಕು ಶೂನ್ಯ ಎಂದು ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಮಧುಸೂದನ ಅಯ್ಯರ್‌ ಹೇಳಿದರು. ಗುರುಪೂರ್ಣಿಮೆ ಮಹೋತ್ಸವದ ಅಂಗವಾಗಿ ಸನಾತನ ಸಂಸ್ಥೆಯ ವತಿಯಿಂದ ನಗರದ ಎಸ್‌.ಡಿ.ಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಗುರುವಿನಿಂದಲೇ ಜೀವನ ಸಾರ್ಥಕವಾಗುತ್ತದೆ ಎಂದರು. ಹಲವು ಜನ ಹಿಂದೂರಾಷ್ಟ್ರ ನಿರ್ಮಾಣ ಅಸಾಧ್ಯವೆನ್ನುತ್ತಾರೆ.ಆದರೆ, ಇಚ್ಛಾ ಶಕ್ತಿಯಿದ್ದಲ್ಲಿ  ಇದು ಸಾಧ್ಯ. ದಿನದಿಂದ ದಿನಕ್ಕೆ ಹಿಂದೂಗಳ ಜನಸಂಖ್ಯೆ ವಿವಿಧ ಕಾರಣಗಳಿಂದ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದರು.

Advertisement


ಆಧ್ಯಾತ್ಮಿಕ ಜೀವನದಲ್ಲಿ ತೊಡಗದಿರುವುದರಿಂದ ಜೀವನದಲ್ಲಿ ಮಾನಸಿಕ ನೆಮ್ಮದಿ ಕಾಣದೆ ಕೆಲವರು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ನಮ್ಮಲ್ಲಿ ಆಧ್ಯಾತ್ಮಿಕತೆ ವಿರುದ್ಧ ಮಾತನಾಡುವ ಸ್ವಾತಂತ್ರ್ಯವನ್ನು ಹೆಚ್ಚಾಗಿಯೇ ನೀಡಲಾಗಿದ್ದು, ಬುದ್ಧಿಜೀವಿಗಳು ಹೇಳಿಕೊಳ್ಳುವ ಕೆಲವರು ತಮ್ಮ ಸ್ವಂತ ಧರ್ಮವನ್ನೇ ಹೀಯಾಳಿಸಿ ಇತರ ಧರ್ಮಗಳನ್ನು ವೈಭವೀಕರಿಸುತ್ತಿದ್ದಾರೆ. ತಮ್ಮ ಕಾಲಿಗೆ ತಾವೇ ಕೊಡಲಿ ಏಟು ಹಾಕುತ್ತಿದ್ದಾರೆ. ನಮ್ಮ ಧರ್ಮದತ್ತ ನಾವೇ ಪ್ರಾಮುಖ್ಯ ನೀಡದಿದ್ದಲ್ಲಿ  ಹಿಂದೆ ಆಳಲು ಬಂದವರಿಗೆ ಮುಂದಕ್ಕೂ ಆಳುವಂತ ಪರಿಸ್ಥಿತಿ ನಿರ್ಮಾಣ ಮಾಡಿಸಿದಂತಾಗುತ್ತದೆ ಎಂದರು. ಎಲ್ಲ ಜಾತಿ, ಧರ್ಮ, ಕಟ್ಟು ಪಾಡುಗಳನ್ನು ಮೀರಿ ಹಿಂದೂಗಳು ಒಗ್ಗೂಡಬೇಕು. ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ತಿಳಿಸಿ ಮುಂದಿನ ಪೀಳಿಗೆಯನ್ನು ಸಿದ್ಧಪಡಿಸಬೇಕು ಹಾಗೂ ಅವರಿಗೆ ಧರ್ಮದ ಬಗ್ಗೆ ತಿಳಿಸಬೇಕು ಎಂದರು. ಬಳಿಕ ‘ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಯ ಉಪಾಯ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. 

ಸಮ್ಮಾನ
ಉಮೇಶ್‌ ಶೆಣೈ ಅವರನ್ನು ಮಂಗಳೂರು ಬಿಜೈ ವನದುರ್ಗಾ ದೇವಸ್ಥಾನದ ಧರ್ಮದರ್ಶಿಗಳಾದ ರಾಜೇಶ್‌ ಹಾಗೂ ರಾಧಾಪ್ರಭು ಅವರನ್ನು ಸನಾತನ ಸಂಸ್ಥೆಯ ನೇತ್ರಾವತಿ ಅವರು ಸಮ್ಮಾನಿಸಿದರು. ಸನಾತನ ಸಂಸ್ಥೆಯ ಧರ್ಮಪ್ರಸಾರ ಸೇವಕಿ  ಮಂಜುಳಾಗೌಡ ಕಾರ್ಯಕ್ರಮದ ವಿವರ ನೀಡಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next