Advertisement

Kaup: ಪೋಡಿ ಅಡ್ಡಿ ನಿವಾರಣೆಗೆ ಗುರ್ಮೆ ಸುರೇಶ್‌ ಶೆಟ್ಟಿ ಆಗ್ರಹ

11:03 PM Dec 15, 2023 | Team Udayavani |

ಬೆಂಗಳೂರು: ಉಡುಪಿ ಜಿಲ್ಲೆಗೆ ಸಂಬಂಧಿಸಿ ಸರಕಾರಿ ಜಮೀನು ಮಂಜೂರಾತಿ ಪ್ರಕರಣಗಳಲ್ಲಿ ಪೋಡಿ ದುರಸ್ತಿ (ಪ್ಲಾಟಿಂಗ್‌) ಪಡಿಸಲು ನಮೂನೆ 1ರಿಂದ 5 ನಮೂನೆಯನ್ನು ಭರ್ತಿ ಮಾಡಿ ಎಲ್ಲ ಮಂಜೂರುದಾರರ ಸಾಗುವಳಿ ಚೀಟಿ, ನಡವಳಿ ಹಾಗೂ ನಕ್ಷೆ ಇರುವ ಪ್ರಕರಣಗಳಲ್ಲಿ ಮಾತ್ರ ಪ್ಲಾಟಿಂಗ್‌ ಆಗುತ್ತಿದೆ. ಆದರೆ ಹಲವು ಮಂಜೂರಾತಿ ಪ್ರಕರಣಗಳಲ್ಲಿ ಮೂಲ ಕಡತ ಲಭ್ಯವಿದ್ದರೂ ಸಾಗುವಳಿ ಚೀಟಿ ಅಥವಾ ನಡವಳಿ ಮಾತ್ರ ಲಭ್ಯವಿರುವ ಪ್ರಕರಣಗಳಲ್ಲಿ ಪ್ಲಾಟಿಂಗ್‌ ಆಗದೆ ಬಾಕಿ ಇರುವುದರಿಂದಾಗಿ ಜನರಿಗೆ ಪೋಡಿ ದುರಸ್ತಿಪಡಿಸಲು ಸಮಸ್ಯೆಗಳು ತಲೆದೋರುತ್ತಿವೆ.

Advertisement

ಮೂಲ ಕಡತ ಲಭ್ಯವಿದ್ದ ಪ್ರಕರಣಗಳಲ್ಲಿ ಸಾಗುವಳಿ ಚೀಟಿ ಅಥವಾ ನಡವಳಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಪರಿಗಣಿಸಿ ಪ್ಲಾಟಿಂಗ್‌ ಕಾರ್ಯ ನಡೆಸುವಂತೆ ಇಲಾಖೆಗೆ ಸೂಚನೆ ನೀಡುವಂತೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ವಿಧಾನಸಭೆಯಲ್ಲಿ ಕಂದಾಯ ಸಚಿವರ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next