Advertisement

ಶಿಕಾರಿ ಮಾಡುವವರ ಗುಂಡಿಗೆ ಗ್ರಾಪಂ ಮಾಜಿ ಉಪಾಧ್ಯಕ್ಷ ಬಲಿ

04:08 PM Mar 27, 2022 | Niyatha Bhat |

ತೀರ್ಥಹಳ್ಳಿ: ಶಿಕಾರಿ ಆಡಲು ಅರಣ್ಯಕ್ಕೆ ಬಂದವರ ಗುಂಡು ತಗುಲಿ ತಾಲೂಕಿನ ಅರಳಸುರುಳಿ ಸಮೀಪದ ನುಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಬಲಿಯಾಗಿದ್ದಾರೆ. ಕಾಂತರಾಜು (38) ಗುಂಡಿಗೆ ಬಲಿಯಾದ ವ್ಯಕ್ತಿ.

Advertisement

ನೊಣಬೂರು ಮತ್ತು ಅರಳಸುರಳಿ ಗ್ರಾಪಂ ನಡುವಿನ ಅರಣ್ಯ ಪ್ರದೇಶದಲ್ಲಿ ಒಟ್ಟು 12 ಮಂದಿ ಶಿಕಾರಿಗಾಗಿ ಕಾಡಿಗೆ ಬೇಟೆಯಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಹಾರಿದ ಗುಂಡೊಂದು ಗ್ರಾಪಂ ಉಪಾಧ್ಯಕ್ಷರಿಗೆ ತಗುಲಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿಕಾರಿಗೆ ಬೇಟೆಯಾಡಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಕಾಂತರಾಜು ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.

ಗುಂಡು ಹಾರಿಸಿದ 12 ಜನರು ಯಾರು ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಘಟನೆ ನಡೆದಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಹೆದ್ದಾರಿಪುರದ ಕಾರ್ಯಕ್ರಮದಲ್ಲಿದ್ದು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಬಂದು ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next