Advertisement

ಅಹ್ಮದಾಬಾದ್‌ಗೆ ಕರ್ಣಾವತಿ ಹೆಸರಿಡುವ ಗುಜರಾತ್‌ ಸರಕಾರ

11:19 AM Nov 07, 2018 | Team Udayavani |

ಅಹ್ಮದಾಬಾದ್‌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಫೈಜಾಬಾದನ್ನು ಅಯೋಧ್ಯೆ ಎಂದು ಪುನರ್‌ ನಾಮಕರಣ ಮಾಡಲು ನಿರ್ಧರಿಸಿದ ಬೆನ್ನಿಗೇ ಇದೀಗ ಗುಜರಾತ್‌ ಸರಕಾರ ಅಹ್ಮದಾಬಾದ್‌ಗೆ ಕರ್ಣಾವತಿ ಎಂದು ಪುನರ್‌ ನಾಮಕರಣ ಮಾಡಲು ಮುಂದಾಗಿದೆ.

Advertisement

ಗಾಂಧೀನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರು “ರಾಜ್ಯದಲ್ಲಿನ ಬಿಜೆಪಿ ಸರಕಾರ ಅಹ್ಮದಾಬಾದ್‌ಗೆ ಕರ್ಣಾವತಿ ಎಂದು ಪುನರ್‌ ನಾಮಕರಣ ಮಾಡಲು ಬಯಸಿದೆ; ಈ ನಿಟ್ಟಿನಲ್ಲಿ ಎದುರಾಗುವ ಕಾನೂನಿನ ತೊಡಕುಗಳು ನಿವಾರಣೆಯಾಗಿ ಪರ್ಯಾಪ್ತ ಜನಬೆಂಬಲ ಪ್ರಾಪ್ತವಾಯಿತೆಂದರೆ ಅಹ್ಮದಾಬಾದ್‌ ಹೆಸರು ಕರ್ಣಾವತಿ ಎಂದು ಶೀಘ್ರವೇ ಬದಲಾದೀತು ಎಂದು ಹೇಳಿದರು. 

ಅಹ್ಮದಾಬಾದ್‌ ಹೆಸರು ಕರ್ಣಾವತಿ ಎಂದು ಬದಲಾಗಬೇಕೆಂಬುದು ಜನರ ಅಪೇಕ್ಷೆಯಾಗಿದೆ. ನಮಗೆ ಈ ನಿಟ್ಟಿನಲ್ಲಿ ಎದುರಾಗುವ ಕಾನೂನು ತೊಡಕುಗಳನ್ನು ನಿವಾರಿಸಲು ಅಗತ್ಯ ಬೆಂಬಲ ಸಿಕ್ಕಿತೆಂದರೆ ಮತ್ತೆ ತಡವೇ ಇಲ್ಲ; ನಾವು ಯಾವತ್ತೂ ಅಹ್ಮದಾಬಾದ್‌ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸಲು ಸಿದ್ಧರಿದ್ದೇವೆ ಎಂದು ನಿತಿನ್‌ ಪಟೇಲ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next