Advertisement

ರಾಜ್‌ಕೋಟ್‌ನ ಸೇತುವೆಗೆ ಜ|ರಾವತ್‌ ಹೆಸರು

11:09 PM Jan 24, 2022 | Team Udayavani |

ಅಹ್ಮದಾಬಾದ್‌: ಗುಜರಾತ್‌ನ ರಾಜ್‌ಕೋಟ್‌ನ ಲಕ್ಷ್ಮೀ ನಗರದಲ್ಲಿ ನಿರ್ಮಿಸಲಾಗಿರುವ ಅಂಡರ್‌ಬ್ರಿಡ್ಜ್ಗೆ ದೇಶದ ರಕ್ಷಣ ಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಹುತಾತ್ಮ ಜನರಲ್‌ ಬಿಪಿನ್‌ ರಾವತ್‌ ಅವರ ಹೆಸರನ್ನು ಇಡಲಾಗಿದೆ.

Advertisement

ಕಳೆದ ಡಿಸೆಂಬರ್‌ನಲ್ಲಿ  ಹೆಲಿಕಾಪ್ಟರ್‌ ದುರಂತದಲ್ಲಿ ಹುತಾತ್ಮರಾದ ಜ.ರಾವತ್‌ ಅವರ ಗೌರವಾರ್ಥ ಅವರ ಹೆಸರನ್ನು ಈ ಕೆಳ ಸೇತುವೆಗೆ ಇಡಲಾಗಿದೆ.

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಸೋಮವಾರ ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ಈ ಅಂಡರ್‌ಬ್ರಿಡ್ಜ್ ಉದ್ಘಾಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next