Advertisement

ಬಿಜೆಪಿಯದ್ದು ಗುಜರಾತ್‌ ಟ್ರೇಲರ್‌; 2019ರಲ್ಲಿ ಸಿನೇಮಾ: ಸೇನೆ

11:17 AM Feb 02, 2018 | Team Udayavani |

ಹೊಸದಿಲ್ಲಿ : “ಗುಜರಾತ್‌ ಚುನಾವಣೆಗಳು ಕೇವಲ ಒಂದು ಟ್ರೇಲರ್‌; ಈಗ ರಾಜಸ್ಥಾನ ಚುನಾವಣೆ ಒಂದು ಇಂಟರ್‌ವಲ್‌; 2019ರಲ್ಲಿ ನಾವು ಚಿತ್ರವನ್ನು ಪ್ರದರ್ಶಿಸಲಿದ್ದೇವೆ’ ಎಂದು ಶಿವಸೇನೆ ಬಿಜೆಪಿಯ ಬಗ್ಗೆ ವ್ಯಂಗ್ಯವಾಡಿದೆ. 

Advertisement

ಬಿಜೆಪಿಯು ಗುಜರಾತ್‌ ಚುನಾವಣೆಯಲ್ಲಿ ತೋರಿರುವ ಕಳಪೆ ನಿರ್ವಹಣೆ ಮತ್ತು ರಾಜಸ್ಥಾನ ಉಪಚುನಾವಣೆಯಲ್ಲಿ  ಅನುಭವಿಸಿರುವ ಪೂರ್ತಿ ಸೋಲಿಗೆ ವ್ಯಂಗ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆ 2019ರ ಲೋಕಸಭಾ ಚುನಾವಣೆಯಲ್ಲಿ ತಾನು ಏಕಾಂಗಿಯಾಗಿ ಹೋರಾಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. 

“ನಮ್ಮ ಈ ನಿರ್ಧಾರದಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ; ಒಂದು ಸಲ ಬಿಲ್ಲಿನಿಂದ ಬಾಣವು ಹೊರಟಿತೆಂದರೆ ಅದು ಹಿಂದಕ್ಕೆ ಬರುವ ಮಾತೇ ಇಲ್ಲ’ ಎಂದು ಶಿವಸೇನಾ ನಾಯಕ ಸಂಜಯ್‌ರಾವತ್‌ ಹೇಳಿದರು. 

ಅರುಣ್‌ ಜೇತ್ಲಿ ಮಂಡಿಸಿರುವ ಕೇಂದ್ರದ ಬಜೆಟ್‌ ಅತ್ಯದ್ಭುತವಾಗಿದೆ; ಆದರೆ ಅದು ಕೇವಲ ಕಾಗದದಲ್ಲಿ ಮಾತ್ರ; ರೈತರು ಈಗಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ; ಬಜೆಟ್‌ ಅನುಷ್ಠಾನದ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ರಾವತ್‌ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next