Advertisement

Cattle: ಅರಣ್ಯದಲ್ಲಿ ಡೈನಾಮೆಟ್ ಸ್ಪೋಟಗೊಂಡು ಹಸುವಿಗೆ ಮಾರಣಾಂತಿಕ ಗಾಯ

03:29 PM Oct 08, 2023 | Team Udayavani |

ಗುಡಿಬಂಡೆ: ಡೈನಾಮೆಟ್ ಸ್ಪೋಟಗೊಂಡು ಹಸುವೊಂದರ ಬಾಯಿಗೆ ಮಾರಣಾಂತಿಕ ಗಾಯಗೊಂಡ ಘಟನೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ಮಾರ್ಗದ ಅರಣ್ಯದಲ್ಲಿ ಆ.8ರ ಭಾನುವಾರ ನಡೆದಿದೆ.

Advertisement

ಪಟ್ಟಣದ ನಿವಾಸಿ ಚಿಕ್ಕನರಸಿಂಹಪ್ಪ ಎಂಬವರಿಗೆ ಸೇರಿದ ಹಸುವಿನ ಬಾಯಿಗೆ ಮಾರಣಾಂತಿಕ ಗಾಯವಾಗಿದೆ ಎಂದು ತಿಈದು ಬಂದಿದೆ.

ಗುಡಿಬಂಡೆ ಗೌರಿಬಿದನೂರು ರಸ್ತೆಗೆ ಹೊಂದಿಕೊಂಡ ಪಟ್ಟಣದ ಸಮೀಪ ದಟ್ಟ ಅರಣ್ಯವಿದ್ದು, ಈ ಅರಣ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಹಸುಗಳು ಮೇವು ಮೇಯಲು ಹೋಗುತ್ತಿದ್ದು. ಆದರೆ ಭಾನುವಾರ ಮಾತ್ರ ಕಾಡು ಹಂದಿಗಳನ್ನು ಬೇಟೆಯಾಡಲು ಇಟ್ಟಿದ್ದ ಡೈನಾಮೆಟ್ ತಿಂದು ಹಸುವಿನ ಬಾಯಿಗೆ ಮಾರಣಾಂತಿಕ ಗಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next