Advertisement

ಕೋವಿಡ್ ಕಾರಣದಿಂದ ಗುಡ್ಡಾಪುರ ದಾನಮ್ಮದೇವಿ ಜಾತ್ರೆ, ಪಾದಯಾತ್ರೆ ರದ್ದು

09:19 AM Dec 06, 2020 | keerthan |

ವಿಜಯಪುರ: ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರುವ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ಗ್ರಾಮದ ದಾನಮ್ಮದೇವಿ ಜಾತ್ರೆ ಈ ಬಾರಿ ರದ್ದುಗೊಳಿಸಲಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರ ಸಮಕಾಲೀನ ಶರಣೆಯ ಕ್ಷೇತ್ರವಾಗಿದ್ದು, ಅಂತಾರಾಜ್ಯ ಮಟ್ಟದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಶರಣೆ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ರದ್ದಾಗಿದೆ.

Advertisement

ಪ್ರತಿವರ್ಷ ಕಾರ್ತಿಕ ಮಾಸದ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದಾನಮ್ಮದೇವಿ ಜಾತ್ರೆಗಾಗಿ ಪಾದಯಾತ್ರೆ ಮೂಲಕ ಗುಡ್ಡಾಪುರ ಗ್ರಾಮಕ್ಕೆ ತೆರಳುತ್ತಾರೆ.

ಇದನ್ನೂ ಓದಿ:ಕುಕ್ಕೆ ಕ್ಷೇತ್ರದಲ್ಲಿ ಜನಸಾಗರ: ಸೇವಾ ರಶೀದಿಗಾಗಿ ಪರದಾಟ, ಸಿಬ್ಬಂದಿ ಜೊತೆ ವಾಗ್ವಾದ

ಆದರೆ ಈ ಬಾರಿ ಡಿಸೆಂಬರ್ 13 ರಿಂದ 16 ರ ವರೆಗೆ ನಡೆಯಬೇಕಿದ್ದ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ರದ್ದು ಮಾಡಲಾಗಿದೆ ಎಂದು ಶ್ರೀದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಸಮಿತಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next