Advertisement

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

06:47 PM Sep 19, 2024 | Team Udayavani |

ದಾವಣಗೆರೆ: ಪಂಚ ಗ್ಯಾರಂಟಿ ಯೋಜನೆಗಳು ಮತ ಪಡೆಯುವುದಕ್ಕಾಗಿ ರೂಪಿಸಿರುವ ಕಾರ್ಯಕ್ರಮ ಎಂದು ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತ ಪಡೆಯುವುದಕ್ಕಾಗಿಯೇ ಗ್ಯಾರಂಟಿ ಯೋಜನೆಗಳ ಕಾರ್ಯಕ್ರಮ ರೂಪಿಸಲಾಗಿದೆ. ಅಂದ ಮಾತ್ರಕ್ಕೆ ನಾವು ಸಂಪೂರ್ಣವಾಗಿ ಗ್ಯಾರಂಟಿ ಯೋಜನೆಗಳ ವಿರೋಧ ಮಾಡುವುದಿಲ್ಲ ಎಂದರು.

ಪಕ್ಷಗಳು ಮತ ಪಡೆಯುವುದಕ್ಕಾಗಿ ಪುಕ್ಕಟೆ ಯೋಜನೆಗಳ ರೂಪಿಸುವ ಬದಲಿಗೆ ಬಡತನ ನಿರ್ಮೂಲನೆಯ ಜೊತೆಗೆ ಪ್ರತಿಯೊಬ್ಬರ ಪ್ರತಿ ದಿನದ ಆದಾಯ ವೃದ್ಧಿಸುವಂತಹ ಕಾರ್ಯಕ್ರಮ, ಯೋಜನೆಗಳ ಅನುಷ್ಟಾನಕ್ಕೆ ತರಬೇಕು. ಆದರೆ, ಅಂತಹ ಕೆಲಸ ಆಗುತ್ತಿಲ್ಲ. ಕೇಂದ್ರ ಸರ್ಕಾರ ತಲಾ ಆದಾಯ ಹೆಚ್ಚಾಗಿದೆ ಎಂದು ಹೇಳುತ್ತದೆ. ತಲಾ ಆದಾಯ ಹೆಚ್ಚಾಗಿದ್ದರೆ ರೂಪಾಯಿಯ ಮೌಲ್ಯ ದಿವಾಳಿ ಆಗಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಧಿಕಾರ, ಕುರ್ಚಿಯ ಆಸೆಗಾಗಿ ಪುಕ್ಕಟೆ ಯೋಜನೆಗಳ ಬದಲಿಗೆ ಬಡತನ ನಿರ್ಮೂಲನೆ, ಆರ್ಥಿಕ ಶಕ್ತಿ ಅಭಿ ವೃದ್ಧಿಯ ಕಾರ್ಯಕ್ರಮ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಗೆ ಕಾನೂನು ರೂಪ ನೀಡಿದಲ್ಲಿ ಯಾವುದೇ ರೈತರಿಗೆ ಸಹಾಯಧನ ನೀಡಬೇಕಾಗಿಲ್ಲ. ರೈತರು ಸರ್ಕಾರದಿಂದ ಭಿಕ್ಷೆ ಬೇಡುವುದೇ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next