Advertisement

Davanagere; ಎಸ್.ಪಿ ಕಾರಿನ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!

06:56 PM Sep 10, 2024 | Team Udayavani |

ದಾವಣಗೆರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರಿನ ಮೇಲೆ ಮಾನಸಿಕ ಅಸ್ವಸ್ಥೆಯೋರ್ವಳು ಕಲ್ಲು ಎಸೆದ ಘಟನೆ ನಗರದ ಎಸ್.ಪಿ ಕಚೇರಿ ಮುಂಭಾಗ ಮಂಗಳವಾರ (ಸೆ.10) ನಡೆದಿದೆ.

Advertisement

ಹರಿಹರ ಪಟ್ಟಣದ ಸರೋಜಾದಾಸ್ ಎಂಬಾಕೆ ಎಸ್.ಪಿ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಕಾರು ಕಚೇರಿಯಿಂದ ಹೊರ ಹೋಗುತ್ತಿದ್ದಂತೆ ಗೇಟ್ ಬಳಿ ನಿಂತಿದ್ದ ಮಹಿಳೆ ಕಲ್ಲು ತೂರಿದ್ದು ಕಾರಿನ ಗಾಜು ಬಿರುಕು ಬಿಟ್ಟಿದೆ. ಆದರೆ, ಈ ಸಂದರ್ಭದಲ್ಲಿ ಕಾರಿನಲ್ಲಿ ಎಸ್.ಪಿಯವರು ಇರಲಿಲ್ಲ. ಚಾಲಕ ಮಾತ್ರ ಇದ್ದರು.

ಕೂಡಲೇ ಪೊಲೀಸರು ಆಕೆಯನ್ನು ಹಿಡಿದು ವಿಚಾರಿಸಿದಾಗ ಮಾನಸಿಕ ಅಸ್ವಸ್ಥೆ ಎಂಬುದು ಗೊತ್ತಾಗಿದೆ. ಕಲ್ಲು ತೂರಲು ಕಾರಣ ಏನೆಂದು ಪೊಲೀಸರು ಎಷ್ಟೇ ಸಮಾಧಾನದಿಂದ ಕೇಳಿದರೂ ಆಕೆ ಸರಿಯಾಗಿ ಮಾತನಾಡಿಲ್ಲ. ಎಸ್‌ ಪಿಯವರನ್ನು ಭೇಟಿ ಮಾಡಿಸುವುದಾಗಿ ಪೊಲೀಸರು ಕೆಲ ಹೊತ್ತು  ಕಚೇರಿಯಲ್ಲಿ ಕೂರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next