Advertisement

ಜಿಎಸ್‌ಬಿ ಮಂಡಲ ಡೊಂಬಿವಲಿ: ಲಕ್ಷ ತುಳಸಿ ಅರ್ಚನೆ

11:38 AM Jun 05, 2018 | Team Udayavani |

ಡೊಂಬಿವಲಿ: ಜಿ. ಎಸ್‌. ಬಿ ಮಂಡಲ ಡೊಂಬಿವಲಿ ವತಿಯಿಂದ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮವು ಜೂ. 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಅಧಿಕ ಮಾಸದ ಪ್ರಯುಕ್ತ ಸಮಾಜ ಕಲ್ಯಾಣಕ್ಕಾಗಿ ಲಕ್ಷ ತುಳಸಿ ಅರ್ಚನೆ ಮತ್ತು ಇನ್ನಿತರ ಪೂಜೆಗಳನ್ನು  ಹಮ್ಮಿಕೊಳ್ಳಲಾಗಿದತ್ತು. ಧಾರ್ಮಿಕ ಕಾರ್ಯಕ್ರಮವಾಗಿ  ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜನೆ ಮತ್ತು ಪಂಚಾಂಮೃತ ಅಭಿಷೇಕ ನಡೆಯಿತು. ನಂತರ ಶ್ರೀ ರಾಮಚಂದ್ರ ದೇವರ ಸಾನಿಧ್ಯದಲ್ಲಿ ಸಮಾಜ ಭಾಂದವರು ಶ್ರೀ ವಿಷ್ಣು ಸಹಸ್ರ ನಾಮ,  ಶ್ರೀ ರಾಮ ಸಹಸ್ರ ನಾಮ ಲಕ್ಷ ತುಳಸಿ ಅರ್ಚನೆ ನಡೆಸಿದರು. ವೇದಮೂರ್ತಿ ಮೋಹನದಾಸ್‌ ಭಟ್‌ ಇವರ ಮಾರ್ಗದರ್ಶನ ಹಾಗೂ ವೇದ ಮೂರ್ತಿ ರಾಘವೇಂದ್ರ ಭಟ್‌ ಕಾರ್ಕಳ ನೇತೃತ್ವದಲ್ಲಿ ಕಾರ್ಯಕ್ರಮ ವಿಧಿವತ್ತಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಮನೋಹರ್‌ ಪೈ, ಕಾರ್ಯಕಾರಿ ಸಮಿತಿಯ ಸದಸ್ಯರು, ಡೊಂಬಿವಲಿ ಮತ್ತು ಕಲ್ಯಾಣ್‌ನ ಸಮಾಜ ಭಾಂದವರು, ಸಮಾಜದ ವಿವಿಧ ಸಂಘಟನೆಗಳ ಪದಾ

ಧಿಕಾರಿಗಳು, ಸದಸ್ಯರು, ಸ್ಥಳೀಯ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿ ಗಳು, ಸಮಾಜ ಸೇವಕರು, ಸಮಾಜ ಬಾಂಧವರು  ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next