Advertisement

ಚಿತ್ರಮಂದಿರಗಳ ಸಿಬ್ಬಂದಿಗೆ ದಿನಸಿ ಕಿಟ್‌

07:35 AM Jun 04, 2020 | Lakshmi GovindaRaj |

ರಾಮನಗರ: “ಚಂದಮಾಮ ಚಕ್ಕುಲಿಮಾಮ’ ಚಿತ್ರತಂಡ ಜಿಲ್ಲೆಯ 6 ಚಿತ್ರಮಂದಿರಗಳ 55 ಸಿಬ್ಬಂದಿಗೆ ಉಚಿತ ದಿನಸಿ ಕಿಟ್‌ ವಿತರಿಸಿತು. ರಾಮನಗರದ ಶ್ರೀರಾಮ, ಶಾನ್‌, ಶಂಕರ್‌ ಚಿತ್ರಮಂದಿರಗಳು, ಚನ್ನಪಟ್ಟಣದ ಶಿವಾನಂದ ಮತ್ತು ಲಕ್ಷ್ಮೀ ಚಿತ್ರಮಂದಿರಗಳು, ಮಾಗಡಿಯ ಬಾಲಾಜಿ ಚಿತ್ರ ಮಂದಿರಗಳ ಸಿಬ್ಬಂದಿಗೆ ಅಕ್ಕಿ, ಸಕ್ಕರೆ, ಎಣ್ಣೆ, ಉಪ್ಪು, ಬೇಳೆ, ಈರುಳ್ಳಿ, ಸೋಪು, ಗೋದಿಹಿಟ್ಟು ಇರುವ ದಿನಸಿ ಕಿಟ್‌ ವಿತರಿಸಿದರು.

Advertisement

ಸುದ್ದಿಗಾರರೊಂದಿಗೆ ಚಂದಮಾಮ ಚಕ್ಕುಲಿ ಮಾಮ ಚಿತ್ರದ ಪುಟಾಣಿ ಕಲಾವಿದೆ ಭೈರವಿ ತಂದೆ ಹಾಗೂ ದಿನ ಪತ್ರಿಕಾ ವಿತರಕ ಹುಲುಕುಂಟೆ ಮಹೇಶ್‌ ಮಾತನಾಡಿ, ತಮ್ಮ ಪುತ್ರಿ ಭೈರವಿ ಅಭಿನ ಯದಿಂದ ಗಳಿಸಿದ ಹಣದ ಜೊತೆಗೆ ದಾನಿಗಳ ನೆರವು ಪಡೆದು ಸುಮಾರು 250 ಕಿಟ್‌  ಸಿದಪಡಿಸಲಾಗಿ ದ್ದು, ಚಿತ್ರಮಂದಿರಗಳ ಸಿಬ್ಬಂದಿಗೆ ವಿತರಿಸುತ್ತಿರುವುದಾಗಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಯ್ದ ಚಿತ್ರಮಂದಿರಗಳ 50 ಸಿಬ್ಬಂದಿಗೆ ಕಿಟ್‌ ವಿತರಿಸುವುದಾಗಿ ತಿಳಿಸಿದರು. ಹರಿ ಕಥೆ, ಭಜನೆ ಮುಂತಾದ  ಸಂಕಷ್ಟದಲ್ಲಿರುವ ಕಲಾವಿದರಿಗೂ ವಿತರಿಸುವುದಾಗಿ ತಿಳಿಸಿದರು. ಜಾನಪದ ಗಾಯಕ ಕುಣಿಗಲ್‌ ರಾಮಚಂದ್ರ ಮಾತನಾಡಿ, ದಿನಸಿ ಕಿಟ್‌ ಸಿದಪಡಿಸಲು ಸಹಕರಿಸಿದ ದಾನಿಗಳು ಮತ್ತು ಸ್ವಯಂ ಸೇವಕರಿಗೆ ಇದರ ಶ್ರೇಯಸ್ಸು ಸೇರಬೇಕು.  ಪುಟಾಣಿ ಬೈರವಿ ತನ್ನದೇ ಮಾತಿನಲ್ಲಿ ಕಿಟ್‌ವಿತರಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಎಬಿಸಿಡಿ ನೃತ್ಯ ಶಾಲೆ ಸ್ಥಾಪಕ ರೇಣುಕಾ ಪ್ರಸಾದ್‌, ಮಾಗಡಿಯ ಗ್ರಾಪಂ ಸುದ್ದಿ ಯೂಟ್ಯೂಬ್ ಚಾನಲ್ ಸ್ಥಾಪಕ ಸೋಮಶೇಖರ್‌, ಆಶಾಕಿರಣ  ಶಿಕ್ಷಣ ಚಾರಿಟಬಲ್‌ ಸಂಸ್ಥೆಯ ಸಂಸ್ಥಾಪಕ ಕೃಷ್ಣಮೂರ್ತಿ ಹಾಗೂ ಚಿತ್ರಮಂದಿರದ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next