Advertisement

ಹಡಿಲು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಗೆ ಪ್ರೋತ್ಸಾಹಕ ಯೋಜನೆ

06:30 AM Jun 24, 2018 | |

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ  ಕೊರತೆಯಿಂದ ಅದೆಷ್ಟೋ ಎಕರೆಗಟ್ಟಲೆ ಕೃಷಿ ಭೂಮಿ ಹಡಿಲು ಬಿದ್ದಿವೆ . ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಡಿಲು ಬಿದ್ದ ಭೂಮಿಯಲ್ಲಿ  ಕೃಷಿ ಮಾಡಲು ವಿಶೇಷ ಪ್ರೋತ್ಸಾಹಕ ಯೋಜನೆ ಮಾಡಿದೆ. ಇದರನ್ವಯ ಕಳೆದ ವರ್ಷ 50 ಜನರಿಗೆ ತಲಾ 1 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡಲಾಗಿದ್ದು ಈ ವರ್ಷ 100 ಜನರಿಗೆ ತಲಾ 1 ಸಾವಿರ ರೂ.ಗಳಂತೆ ಒಟ್ಟು 1 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ಯೋಜನೆಯ ಕೃಷಿ ಅಧಿಕಾರಿ ಚೇತನ್‌ ಕುಮಾರ್‌, ಪ್ರಗತಿ ಬಂಧು ತಂಡಗಳ ಮೂಲಕ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದ ಜತೆಗೆ ಹಡಿಲು ಭೂಮಿ, ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ತಂಡದ ಸದಸ್ಯರೇ ಕೃಷಿ ಮಾಡುವುದರೊಂದಿಗೆ ಸರಕಾರಿ ಇಲಾಖೆಗಳ ಮೂಲಕವೂ ಮಾಹಿತಿ ನೀಡಿ ಉಪಯೋಗವಾಗುವಂತೆ ಮಾಡಲಾಗುತ್ತದೆ. ಇದರಿಂದ ಹಲವಾರು ಕುಟುಂಬಗಳು ಅಭಿವೃದ್ಧಿ ಕಂಡಿವೆ ಎಂದು ಹೇಳಿದ್ದಾರೆ.  

ಶ್ರಮ ವಿನಿಮಯ
ಸಂಘಗಳನ್ನು ಕಟ್ಟಿಕೊಂಡ ಪ್ರಗತಿ ಬಂಧು ತಂಡದ ಸದಸ್ಯರು ವಾರದ ಶ್ರಮ ವಿನಿಮಯದಲ್ಲಿ ಕೂಲಿಯಾಳುಗಳ ಸಮಸ್ಯೆ ಇರುವುದರಿಂದ ತಮ್ಮ ತಮ್ಮ ಮನೆಯ ಕೆಲಸದ ಜೊತೆಗೆ ಹಡಿಲು ಭೂಮಿ ಕೃಷಿ,  ವಾಣಿಜ್ಯ ಬೆಳೆ, ಜಾಗದ ಸಮತಟ್ಟು ಇನ್ನಿತ್ಯಾದಿ ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದೆ.

ಕೃಷಿಗೆ ಉತ್ತೇಜನ 
ಯೋಜನೆಯಡಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಆಸಕ್ತರಿಗೆ  ಕೃಷಿ ಇಲಾಖಾ ಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಯಲ್ಲಿ ಮಾಹಿತಿಯೊಂದಿಗೆ ಸಸಿ ವಿತರಣೆ, ಅಧ್ಯಯನ ಪ್ರವಾಸ, ಕೃಷಿ ಉತ್ತೇಜನಕ್ಕೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಸ್ವಂತ ಭೂಮಿ ಇಲ್ಲದವರು ಕೂಡಾ ಹಡಿಲು ಬಿದ್ದ ಇತರರ ಭೂಮಿಯನ್ನು ಒಪ್ಪಂದದ ಮೇರೆಗೆ ಪಡೆದುಕೊಂಡು ಕೃಷಿ ನಡೆಸುತ್ತಿರುವುದು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ.

ಸಾಕಷ್ಟು ಯಶಸ್ವಿ
ಹಡಿಲು ಬಿದ್ದ ಭೂಮಿಯಲ್ಲಿ ಹಸಿರು ಬೆಳೆಸಲು ಯೋಜನೆ ಕೈಗೊಂಡ ಪ್ರೋತ್ಸಾಹಕ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿದೆ. ಹಡಿಲು ಭೂಮಿಯನ್ನು ಇತರರಿಗೆ ಒಪ್ಪಂದದ ಮೂಲಕ ನೀಡಿ ಅಲ್ಲಿ ತರಕಾರಿ, ಭತ್ತ ಬೆಳೆಯುತ್ತಿದ್ದಾರೆ. 
– ಮುರಳೀಧರ ಶೆಟ್ಟಿ, ಯೋಜನಾಧಿಕಾರಿ, ಧರ್ಮಸ್ಥಳ ಯೋಜನೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next