Advertisement

ಮದುವೆ ದಿನವೇ ಗ್ರಾಮಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮದುಮಗ

11:40 AM Dec 11, 2020 | sudhir |

ಮುಳಗುಂದ: ಗ್ರಾಮಾಂತರ ಭಾಗದಲ್ಲಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಇನ್ನೊಂದು ದಿನ ಬಾಕಿ ಇರುವಾಗಲೇ ತನ್ನ
ಮದುವೆ ದಿನವೇ ಮದುಮಗ ಗ್ರಾಪಂ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿ, ನಂತರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಸಂಗ ಸಮೀಪದ ಸೊರಟೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುತ್ತು(ಪರಶುರಾಮ) ಮಲ್ಲಾರಿ ಮದುವೆ ಧಾರವಾಡ ಜಿಲ್ಲೆಯ ಯತ್ತಿನಗುಡ್ಡ ಗ್ರಾಮದ ಜ್ಯೋತಿ ಜತೆ ಸೊರಟೂರ ಗ್ರಾಮದ ವರನ ಸ್ವಗೃಹದಲ್ಲಿ ನಿಶ್ಚಯವಾಗಿತ್ತು.

Advertisement

ರಾಜಕೀಯದಲ್ಲೂ ಆಸಕ್ತಿ ಹೊಂದಿರುವ ಮುತ್ತು ಮಲ್ಲಾರಿ ತನ್ನ ಮದುವೆ ದಿನವೇ ಗ್ರಾಮದ 3ನೇ ವಾರ್ಡ್‌ನ ಸಾಮಾನ್ಯ
ಮೀಸಲಾತಿ ಕ್ಷೇತ್ರಕ್ಕೆ ಆಯ್ಕೆ ಬಯಸಿ ವರನ ವಸ್ತ್ರಾಲಂಕಾರದಲ್ಲಿಯೇ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ಮದುಮಗ ಮುತ್ತು ಮಲ್ಲಾರಿ, ಹಿರಿಯರು ನಿಶ್ಚಯಿಸಿದಂತೆ ನಮ್ಮ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತಿದ್ದು, ಈ ಶುಭ ಗಳಿಗೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದೇ ದಿನ ನಾಮಪತ್ರ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದಾಗ ಹಿರಿಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಹಾಗೂ ಮದುವೆ ಕಾರ್ಯ ನಡೆಯುತ್ತಿರುವುದು ಉತ್ಸಾಹ ತುಂಬಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಹುಬ್ಬಳ್ಳಿ: ಬಿಕೋ ಎನ್ನುತ್ತಿದೆ ಬಸ್ ನಿಲ್ದಾಣ, ಪರದಾಡುತ್ತಿದ್ದಾರೆ ಪ್ರಯಾಣಿಕರು!

Advertisement

Udayavani is now on Telegram. Click here to join our channel and stay updated with the latest news.

Next