Advertisement

Gram Panchayat “ಗಾಂಧಿ ಗ್ರಾಮ ಪುರಸ್ಕಾರ’ಮುಂದುವರಿಸಲಿ: ಮಂಜುನಾಥ ಭಂಡಾರಿ

01:28 AM Feb 18, 2024 | Team Udayavani |

ಬೆಂಗಳೂರು: ಗ್ರಾಮ ಪಂಚಾಯತ್‌ಗಳಿಗೆ “ಗಾಂಧಿ ಗ್ರಾಮ ಪುರಸ್ಕಾರ’ ನೀಡುವುದರನ್ನು ರಾಜ್ಯ ಸರಕಾರ ಮುಂದುವರಿಸಬೇಕೆಂದು ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ ಭಂಡಾರಿ ಆಗ್ರಹಿಸಿದ್ದಾರೆ.

Advertisement

2019-20, 2020-21ನೇ ಸಾಲಿನಲ್ಲಿ ಆಯ್ಕೆ ಆಗಿರುವ ಗ್ರಾಮ ಪಂಚಾಯತ್‌ಗಳಿಗೆ ಪುರಸ್ಕಾರ ನೀಡುವುದರ ಜತೆಗೆ ಪುರಸ್ಕಾರದ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ. 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮ ಪಂಚಾಯತ್‌ ನೌಕರರಿಗೆ ವೇತನ ನೀಡುವಂತೆ ಆದೇಶಿಸಲಾಗಿದೆ.

ಇದು ಕೇಂದ್ರ ಸರಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದ್ದು, ಇದನ್ನು ನಿಲ್ಲಿಸಬೇಕು. ರಾಜ್ಯ ಸರಕಾರ ಘೋಷಿಸಿರುವಂತೆ ನೌಕರರ ವೇತನವನ್ನು ಸರಕಾರವೇ ನೀಡಬೇಕು. ಕೋವಿಡ್‌ನ‌ಲ್ಲಿ ಮೃತಪಟ್ಟ ಗ್ರಾಮ ಪಂಚಾಯತ್‌ ನೌಕರರ ಕುಟುಂಬಕ್ಕೆ ಸರಕಾರದಿಂದಲೇ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next